ಅಂದು ಹೆಳುತ್ತಿದ್ದರು
ಗುರುವೇ ನಮಃ
ಇಂದು ಹೇಳುತ್ತಿದ್ದಾರೆ
ಗುರುವೇನ್ ಮಹಾ
ಅಂದಿನದು
ರಣಧೀರರ ಹಿಂಡು
ಇಂದು
ರಣಹೇಡಿಗಳ ದಂಡು
ಇಲ್ಲ ಗುರುವಿನ ಮೇಲೆ
ಭಕ್ತಿ
ಸಿಗದು ಬಾಳಿಗೆ
ಮುಕ್ತಿ
ಅಂದು ಗುರುಗಳಿಗೆ
ಗುರುದಕ್ಷಿಣೆ
ಇಂದು ಬೇಕಾಗಿದೆ
ಗುರುವಿಗೇ ರಕ್ಷಣೆ
ಬೇಕು ಗುರು ಬಾಳಿಗೆ
ಆಗಲೇ ಅಲ್ಲಿ ಏಳಿಗೆ
No comments:
Post a Comment