Followers

About Me/ನನ್ನ ಬಗ್ಗೆ

Sunday, December 29, 2013

"ವರ"

ಇದ್ದರೆ
ದೇ"ವರ"
"ವರ"
ಸಿಗುವನು
ಒಳ್ಳೆಯ
"ವರ"
ಇಲ್ಲದಿರಲು ಕಳಿಸುವವ
ನನಗೆ
ತ"ವರ"
ಶುರುವಾಗುವುದು
ಕಷ್ಟ-ಕಾರ್ಪಣ್ಯಗಳ
ಪ್ರ"ವರ"
ಅದಕೆ
ಕೊಡುದೇವಾ
ನೀ ಒಳ್ಳೆಯ "ವರ"

ಒ-ಲವು

ಅಂದುಕೊಂಡಿದ್ದೆ
ನಿನ್ನ ಮೇಲೆ
ನನಗೆ ಒಲವು
ಆದರೆ ಕೊನೆಗೆ
ತಿಳೀತು
ಓ ಅದು ಲವ್ವು

ಹಳ್ಳಿರಸ್ತೆ

ಹಳ್ಳಿರಸ್ತೆ ಪ್ರವಾಸ
ಆಗುವುದು ಪ್ರಯಾಸ
ಕೊಡುವುದು ಆಯಾಸ
ತುಸು ಹೆಚ್ಚಾದಾಗ
ಪ್ರಸವ ವೇದನೆಯ ಭಾಸ

ನಿ-ದರ್ಶನ

ಪ್ರೀತಿಗಿವೆ ಹಲವು
ನಿದರ್ಶನ
ಅದಕೆ ಪ್ರಿಯೆ ನೀಡು
ನೀ ದರ್ಶನ

ಪುಷ್ಪ

ಪುಷ್ಪ
ಕೊಡಬೇಕೆಂದಿದ್ದೆ
ನಿನ್ನ ಕೈಗೆ
ಇಟ್ಬಿಟ್ಟೆಯಲ್ಲೇ
ನನ್ನ ಕಿವಿಗೆ

ವಿನಂತಿ

ನಿನಗೆ
ಮಾಡಿಹನು
ಪ್ರೀತಿಗಾಗಿ
ವಿನಂತಿ!
ಕಾಯುತಿರುವೆ
ದಿನಂಪ್ರತಿ!
ಬೇಗ ಹೇಳು
ನೀ ಏನಂತಿ?

ಪ್ರೇಮ್ ಕ-ಹಾನಿ

ನೀನೇ
ಶುರು ಮಾಡ್ದೆ
ಪ್ರೇಮ್ ಕಹಾನಿ!
ಕೈ ಕೊಟ್ಟು
ಮಾಡ್ಬಿಟ್ಟೆ
ನನಗೆ ತುಂಬಾ
ಹಾನಿ!

ಬಿನ್ನಿಮತ


ಕೇಜ್ರಿವಾಲಾ


ವೃತ್ತಿ


ಪ್ರೇಮ್ ಕಹಾನಿ


ಗು-ಲಾಬಿ


ನಲ್ಲೆ


ಲತೆ


"ಬೇಡ"

ಅವಳ
ಪ್ರೀತಿಯ
ಹಕ್ಕಿಗೆ
ನಾನಾದೆ
"ಬೇಡ"
ಆದರೆ
ಅವಳು
ಹೇಳಿದಳು
ನೀ ನನಗೆ
"ಬೇಡ"

ಬಿನ್ನಿ-ಭಿನ್ನ

ಹಿಂದೆ
ಎಎಪಿಯಲ್ಲಿ
ಐಕ್ಯಮತ
ಬಿನ್ನಿಯಿಂದ
ಭಿನ್ನಮತ
ಅಧಿಕಾರಕ್ಕಾಗಿ
ಭಿನ್ನರಾಗವೆಳೆದರೆ
ಯಾರಿಗೂ ಇಲ್ಲ ಹಿತ

ಕಾದೆ

ಅವಳಿಗಾಗಿ
ನಾ ಕಾದೆ
ಅವಳು
ಬರದಿದ್ದಾಗ
ನಾ ಕಾದೆ

ನೆರೆ ಹೊರೆ

ನೆರೆ ಹೊರೆ
ಚೆಂದರಿಲು
ನೆರೆ ಬಂದರೂ
ಹೊರೆ ಎನಿಸದು
ಅದಿರದಿರಲು
ನೆರೆಯಲಿ ಜೀವನವೇ
ಮರೆ ಆಗುವುದು

Wednesday, December 25, 2013

ಸೇರು

ನನ್ನ ಪ್ರೀತಿ
ಸೇರಾದರೆ
ನಿನ್ನ ಪ್ರೀತಿ
ಸವಾಸೇರು
ಅದಕೆ
ನೀ ನನ್ನ ಸೇರು

ಕಮರಿ

ಕಮರಿಗೆ
ಬಿದ್ದ
ಬಸ್ಸಿನಿಂದ
ಕನಸು
ಕಮರಿತು

ನಿನ್ನೆ

ನಾಳೆ
ಇಂದು
ನಿನ್ನೆ
ನೆನೆಯುತ್ತಿರುವೆ
ನಿನ್ನೆ

ಸಾರಿ

ನನ್ನವಳು
ಕೇಳಿದಳು
ಸಾರಿ
ನಾನಂದೆ
ಸ್ಸಾರಿ
ಕೊಡುವೆ
ಮತ್ತೊಂದು
ಸಾರಿ

ನಾ......ರಿ

ದೂರದಿಂದ
ಕಂಡಳು
ಸುಂದರ
ನಾರಿ
ಹತ್ತಿರ
ಹೋದೆ
ನನ್ನವಳು
ಹೇಳಿದಳು
ನಾ......ರಿ

ನಗು

ನಗ
ದೋಚದ
ಆತ
ಎನ್ನ
ನಗು
ದೋಚಿದ

ಸೇರು

ನಮ್ಮಿಬ್ಬರ ಪ್ರೀತಿ
ಸೇರಿಗೆ ಸವಾಸೇರು
ಅದಕೆ
ನನ್ನ ಬಾಳಿಗೆ ನೀ ಸೇರು

ಕುಂತಿ

ನೀ ಯಾಕ್
ಹಿಂಗ್
ಕುಂತಿ
ಕಾಣಕ್ಕತ್ತಿ
ಕುಳಿತಿರುವ್ಹಂಗೆ
ಕೌರವರ
ಕುಂತಿ

Tuesday, December 24, 2013

ರೇಖೆ


ಗನ್ನು-ಪೆನ್ನು


ಕ್ಯಾಲೆಂಡರ್


ಹಿಂಗೇಕೆ?


ನೀ-ರಸ


ಟೈ-ಟಾನಿಕ್


ತಿಮಿಂಗಲ

ಲೋಕಾಯುಕ್ತ ದಾಳಿಗೆ
ಸಿಗುತ್ತಿವೆ ತಿಮಿಂಗಲ
ಹಲವು ಮೀನುಗಳನ್ನು ತಿಂದು
ಬ್ರಷ್ಟಾಚಾರದ ಹಣದಲಿ ಮಿಂದು
ಬಡ ಜನರನ್ನು ಕೊಂದು

ದು-ಸ್ವಪ್ನ

ಅವಳ ಹೆಸರು ಸ್ವಪ್ನ
ನನ್ನ ಬಾಳಿನ ಸ್ವಪ್ನ
ನನ್ನ ಕಣ್ಣಿಂದ ಮರೆಯಾದ
ಕ್ಷಣದಿಂದ ನನ್ನ ಬಾಳಿನಲ್ಲಿ
ಇರುವುದು ಬರೀ ದುಸ್ವಪ್ನ

ಹಿಂಗೇಕೆ?

ತೋಡಲು ಬಾವಿ ನೀರು
ಬರದು
ಕಾರಣ ಜಮೀನುಗಳಲಿಲ್ಲ
ಬದು
ನೀರು ಕೆಳಗೆ
ಇಂಗದು
ಅದಕೆ ನೀರು
ಸಿಗದು
ಮಾಡಿ ಭೂತಾಯಿಯ ಒಡಲ
ಬರಿದು
ತೆಗೆದವು ಬೋರ್ ವೆಲ್ ನಿಂದ
ಇರಿದು
ಈಗಲಾದರೂ ಇದನು
ಅರಿತು
ಆಲೋಚಿಸು ನೀರಿನ ಸಂರಕ್ಷಣೆಯ
ಕುರಿತು
ಕೇಳು ಹಿರಿಯರ ನುಡಿ
ಅವರ ಆದರ್ಶದಲಿ ನಡಿ

ಟೈ-ಟಾನಿಕ್

ಅವಳು ಜೊತೆಗಿದ್ದರೆ
ನನಗೆ ಟಾನಿಕ್
ಇಲ್ಲದಿದ್ದರೆ
ಅನಿಸುತಿದೆ
ಮುಳುಗುತಿರುವ
ಟೈಟಾನಿಕ್

ಗನ್ನು-ಪೆನ್ನು

ಅವಳು ಜೊತೆಗಿದ್ದರೆ
ನಾನು
ಏಕೆ-47 ಗನ್ನು
ಇರದಿರಲು
ಇಂಕ್ ಖಾಲಿಯಾದ
ಪೆನ್ನು

ಚಂದಿರ-ಇಂದಿರಾ

ನನ್ನ ಬಾಳ
ಕತ್ತಲೆಯಲಿ
ಚಂದಿರನಾಗಿ
ಬಂದ
ಇಂದಿರಾ
ನೀನಿರಲು ಬಾಳು ಹುಣ್ಣಿಮೆ
ಇರದಿರಲು ಅಮವಾಸ್ಯೆ

ಬುದ್ಧಿ-ವಾದ

ಹಿಂದೆ ಹಿರಿಯರು
ಹೇಳುತ್ತಿದ್ದರು
ಬುದ್ಧಿವಾದ
ಇಂದು
ಬುದ್ಧಿ ಹೇಳಿದರೆ
ಮಾಡುವರು
ವಾದ

ಕ್ಯಾ ಐಡಿಯಾ ಸರ್-ಜಿ

ಕೈಗೆ ಬೈ
ಹೇಳಿ
ಚುನಾವಣೆ
ಎದುರಿಸುವೆವೆಂದ
ಕೇಜ್ರಿ
ಸರ್ಕಾರ
ರಚನೆಗೆ
ಹಾಕಿದ್ರು
ಅರ್ಜಿ
ಕಾಂಗ್ರೆಸ್ಸೆಂದ್ರೆ
ಅಲರ್ಜಿ?
ಅಧಿಕಾರಕ್ಕಾಗಿ
ಮುತುವರ್ಜಿ
ಎಲ್ಲಾ ನೋಡಿದ
ಮೇಲೆ
ಹೇಳ್ಬೇಕನಿಸುತ್ತೆ
ಕ್ಯಾ ಐಡಿಯಾ ಸರ್-ಜಿ

ದುಷ್ಟ-ಬ್ರಷ್ಟ

ಒಬ್ಬ ದುಷ್ಟ
ಇನ್ನೊಬ್ಬ ಬ್ರಷ್ಟ
ಕೆಲವರು ನಿಷ್ಟರಾಗಿರಲು
ಹೇಗೆ ದೂರವಾಗುವುದು ಕಷ್ಟ
ತಿಳಿಯಲಾರೆ
ಇವರ ಕಂಡರೆ
ಮತದಾರರಿಗೇಕೆ ಇಷ್ಟ?

ಭಾವನೆ

ಭಾವನೆಗಳ ಬೀಜ
ಮೊಳಕೆಯೊಡೆಯಲಿಲ್ಲ
ಮೊಳಕೆಯೊಡೆದ ಚಿಗುರು
ಮರವಾಗಲಿಲ್ಲ!
ನೋವಿನ ಪ್ರಪಾತ
ನೀಡಿಹುದು ಆಘಾತ!
ಕನಸಿನ ವರ್ಷ
ತರಲಿಲ್ಲ ಹರ್ಷ!
ಉಳಿದ ನೆನಪು
ಪುನಃಪುನಃ ಕಾಡಲು
ಬೇಡ ಕಣ್ಣೀರಿನ ಸಾಂಗತ್ಯ
ಹೊಸ ಆಲೋಚನೆ ಅಗತ್ಯ
ಅದು ಮನದಿರಲಿ ನಿತ್ಯ!

ತುಕ್ಕು-ಸೊಕ್ಕು

ಉಕ್ಕಿ
ಬಂದ
ಪ್ರೀತಿಯ
"ತುಕ್ಕು"
ಎಂದು
ತಿಳಿದವನಿಗೆ
"ಸೊಕ್ಕು"
ನಿಮ್ಮ
ಹಾರೈಕೆಯಲಿ
ಹೇಳಿ
ಅವಗೆ
"ಗುಡ್ ಲಕ್ಕು"
ನೂರ್ಕಾಲ
ಬಾಳಲವ
"ನಕ್ಕು"

ಕವಿ

ಕವಿಯಂತೆ
ಕಾಣುವ
ಕುಡಿದಿರಬಹುದು!
ಕುಡಿದವ
ಕವಿಯಂತೆ
ಕಾಣಬಹುದು!
ಆದರೆ
ಕಲ್ಪನೆಯಲಿ
ಕನಸ
ಕಂಡು
ಕುಂಚದಲಿ
ಕವಿತೆಯ
ಕೆತ್ತುವವನೇ
ಕವಿ!
ಏನಂತೀರಾ??????

"ಸಾಲು"

ಅವ
ಹೇಳುತ್ತಿದ್ದ
ಅವಳಿಗೆ
ಅವನ
ಕವನಗಳ
"ಸಾಲು"
ಅವಳು
ಹೇಳಿದಳು
ಪ್ರಿಯ
ಇನ್ನು
"ಸಾಲು"
(ನಾನು ಇನ್ನೂ ಯಾರಿಗೂ ಹೇಳಿಲ್ಲ)

ರೇಖೆ

ನನ್ನ ಬಾಳಲಿ
ಬಂದ
ಅವಳು
ಸುವರ್ಣ ರೇಖೆ
ಇಂದು
ಅವಳಿಲ್ಲದೇ
ಬಾಲಾಗಿದೆ
ವಕ್ರ ರೇಖೆ

ಜನನ-ಮರಣ

ಹೆಚ್ಚುತ್ತಿದೆ "ಜನ"ನ
ಅದಕ್ಕೆ ತಕ್ಕಂತೆ
ಹೆಚ್ಚುತ್ತಿದೆ "ಮರ"ಣ

ಹೊತ್ತು

ನೆನೆಪು
ಹೋಗಿದ್ದೆ
ನೀ ನನ್ನನ್ನು ಹೊತ್ತು
ಬೇಕೆನಿಸಿದೆ
ನಿನ್ನ ಸಂಗ
ಈ ಹೊತ್ತು

ಏಕಾಂತ

ಇದ್ದಾಗ ಏಕಾಂತ
ನೆನಪಾಗುವನು ಕಾಂತ
ಅವನು ಅಯಸ್ಕಾಂತ
ಅವನಿರದಿರೆ ಮನವಿರದು ಶಾಂತ

ವ್ಯತ್ಯಾಸ

ದಿನವಿಡೀ ಕೆಲಸ ಮಾಡಿ
ಕೂಲಿ ಸಿಗಲು
ಬರುವುದು ಒಳ್ಳೆಯ ನಿದ್ದೆ
ಕೆಲಸ ಮಾಡದೇ
ದುಡ್ಡು ಸಿಗಲು
ಇನ್ನೂ ದುಡ್ಡು ಮಾಡುವ ಚಿಂತೆ

ವಾಸ್ತವ

ಸರಿಯಿರದಿದ್ದರೆ ನೀರಿನ ಪೂರೈಕೆ
ಎತ್ತುವರು ಪೊರಕೆ
ನೀರು ಪೋಲಾಗಿ ಹೋಗುವಾಗ
ಹೊಡೆಯುವವರು ಗೊರಕೆ
ಏನೇನೋ ಅಂದುಕೊಂಡು
ಮಾಡುವರು ಹರಕೆ
ಅದು ತೀರದಿರಲು
ದಿನವಿಡೀ ಇರುವುದವರಿಗೆ ತುರಿಕೆ
ಆಗುವವರೆಗೆ ಮನವರಿಕೆ
ಇರುವುದು ಇದೆಲ್ಲದರ
ಕನವರಿಕೆ

ಜನಾಭಿಪ್ರಾಯ

ಜನಾಭಿಪ್ರಾಯ ಸಂಗ್ರಹಕ್ಕೆ ೨೫ ಲಕ್ಷ ಪತ್ರ
ಹೋಗಿದ್ದು ನಿಜಾನಾ ಜನರ ಹತ್ರ
ಇವರೂ ಹೇಳಬಹುದಾ ರಾಜಕೀಯ ಮಂತ್ರ
ಈಗಲೂ ನಡೆಯಬಹುದಾ ತಂತ್ರ-ಪ್ರತಿತಂತ್ರ

ಬಿಕ್ಕಟ್ಟು

ಉಲ್ಬಣಿಸಿದೆ ರಾಜತಾಂತ್ರಿಕ ಬಿಕ್ಕಟ್ಟು
ನೀಡುತಿದೆ ಭಾರತ ಅಮೇರಿಕಕ್ಕೆ ತಿರುಗೇಟು
ತೆಗೆಸುತ್ತಿದ್ದಾರೆ ಬ್ಯಾರಿಕೇಡು, ಗೇಟು
ಅನ್ನಬಹುದಾ ಇದಕೆ ಏಟಿಗೆ ಎದುರೇಟು

Saturday, December 14, 2013

ಕಾರಣ

ನಾ ಅವಳ ನೆನೆಯಲು
ಹಲವು ಕಾರಣ
ಜಗಳ ಮಾಡುವಳು ವಿನಾಕಾರಣ
ತಡವಾಗಿ ಬಂದರೆ ಕೇಳುವಳು ಕಾರಣ
ಹಾಕುವಳು ಸಾರಿಗೆ ಹೆಚ್ಚು ಖಾರಾನಾ
ಕೇಳುವಳು ಹೊಸ ಕಾರನ್ನಾ

ಯುವಕ

ಸಿಗರೇಟು
ಸೇದಿ
ಸುರುಳಿಯಾಗಿ
ಹೊಗೆ
ಬಿಡುವ
ಇವ
ಯುವಕ
ಸ್ವಲ್ಪ
ದಿನದಲ್ಲೇ
ಸೇರುವ
ಕ್ಯಾನ್ಸರ್ ನ
ನರಕ

ಮಸಿ

ಮೌನದ
ಹಿಂದಿರುವ
ಮೂಕವೇದನೆ
ಅರಿಯದೆ
ಮಂದನೆಂದು
ಜರಿದ
ಅವಳ ಮರು
ಮಾತನಾಡಿಸಲು
ಮನಸಿಲ್ಲ
ಮೈಬಣ್ಣ
ಬಿಳಿ
ಆದರೆ
ಒಳಗೆ
ತುಂಬಿದೆ
ಬರೀ ಮಸಿ

ಅವ-ಸರ

ಮದುವೆಗೆ
ಅವಳಿಗೆ
ತುಂಬಾ
ಅವಸರ
ಅದಕೆ
ಕೊಡಿಸಬಹುದೆಂದು
ಅವ ಸರ

ಕೈ

ಕೈಕೊಡುವುದು
ಮಾನವ ಸಹಜ ಧರ್ಮ
ಆದರೆ ಇದೆ ವ್ಯತ್ಯಾಸ
ಕೆಲವರು ನಕ್ಕು ಕೈಕೊಡುತ್ತಾರೆ
ಆದರೆ "ಕೈಕೊಟ್ಟು" ನಗುತ್ತಾರೆ

ಆಸೆ

೧೧.೧೨.೧೩
ಕನಸು ಇತ್ತು ನೂರು
ನನಸಾಗಲಿಲ್ಲ ಮೂರು
ಆಯಿತೆಲ್ಲ ನುಚ್ಚು ನೂರು

ನೆನಪು

ಅವರಿವರು ಹೇಳಿದರೆಂದು
ಅವಳಿಂದ ದೂರವಾದೆ
ಇಂದು ಅವಳ ನೆನಪೊಂದಿದೆ
ಆದರೆ ನನ್ನ
ಆಸೆ ಆಕಾಂಕ್ಷೆಗಳನ್ನೆಲ್ಲ ಕೊಂದಿದೆ

ಪ್ರಗತಿ ಪರಿಶೀಲನಾ ಸಭೆ

ದಿನಬೆಳಗಾದರೆ
ಸಭೆ ನಡೆಸಿ
ಪ್ರಗತಿ ಪರಿಶಿಲನೆಯಲ್ಲಿ ತೊಡಗಿರುವರು
ಯಾರೋ ಕೇಳಿದರಂತೆ
ಇದನ್ನೇ ಮಾಡುತ್ತಿದ್ದರೆ
ಪ್ರಗತಿ ಮಾಡುವರ್ಯಾರು ಸರ್?

ವಿಧಿಬರಹ

ಬತ್ತದ ತೆನೆಯ ನೋಡಿ
ಪಕ್ಷಿ ಖುಷಿ ಪಟ್ಟಿತು
ಆದರೆ ಹಿಂದಿನಿಂದ
ಬಂದ ಗುಂಡಿನಿಂದ
ಅದು ಮೃತಪಟ್ಟಿತು

ದೇವರು

ದೇವರ ಬಳಿ ಬೇಡಲು
ಸಂಕೋಚ
ಕೇಳಿದ್ದನ್ನೆಲ್ಲಾ ಕೊಡುವನೇ
ಎಂಬ ಪ್ರಶ್ನೆ
ಆದರೂ ಬೇಡಿದೆ
ಆದರೆ ಹಲವು ಸಲ
ಅನಿಸುತಿದೆ ನನಗಾಗಿ
ಹಾಂ ಎನ್ನುತ್ತಿರುವನೆಂದು
ಕೈಮುಗಿದು ಬೇಡಿದಾಗ
ಕಷ್ಟ ದೂರವಾಗುವುದಿಲ್ಲ
ಆದರೆ ಅದನ್ನು ಎದುರಿಸುವ ಶಕ್ತಿ ಬರುತ್ತದೆ

ರೋಮಾಂಚನ

ಅವಳು ಎದುರಿಗೆ ಸಿಗಲು
ತುಟಿಯಂಚಿನಲಿ ನಗಲು
ನನ್ನೆದೆಯಲಿ ರೋಮಾಂಚನ
ಅವಳು ಸಿಗದಿರಲು
ಯೋಚಿಸುವೆ ಕೊಂಚ ನಾ

ವ್ಯತ್ಯಾಸ

ಕೊಡುವ ಕಾಸು ಕೊಡಲು
ಸಿಡಿಮಿಡಿಗೊಳ್ಳುವ
ಕಂಡಕ್ಟರ್
ಸರಿಯಾಗಿ ತಪಾಸಣೆ ಮಾಡಲು
ಮೀನಮೇಷ ಮಾಡುವ
ಡಾಕ್ಟರ್
ಕಲಿಸಲಾಗದೇ ಒದ್ದಾಡುತ್ತಿರುವ
ಟೀಚರ್
ಆದರೆ ಏನು ಗೊತ್ತಿಲ್ಲದೇ
ರಾಜ್ಯವಾಳುವವ
ಪೊಲಿಟಿಕಲ್ ಲೀಡರ್

ನಾಯ"ಕರು"

ನಮ್ಮಲ್ಲಿ ಹಲವು ರೀತಿಯ
ನಾಯಕರು
ಕೆಲವರು
ನಾಯಕರು
ಕೆಲವರು
ಹಲವರ ಹಿಂದೆ ಹೋಗುವ
"ಕರು"

ಸ್ವಾಮಿ-ಆಸಾಮಿ

ಮಾಡಬಾರದ್ದನ್ನಾ ಮಾಡಿ
ಜೈಲಿಗೆ ಹೋದರು
ಸ್ವಾಮಿ
ಅಂದುಕೊಳ್ಳುತ್ತಿರುವರು
ಜನ
ಅವರನ್ನು
ಆಸಾಮಿ

"ಜನ"ಸಾಮಾನ್ಯ"

ಕೈ ಎತ್ತಿದರು
ಕಮಲ ಕೊಟ್ಟರೂ
ಜನ ನಂಬಲಿಲ್ಲ
ಈಗ ಅನಿಸುತಿದೆ
ಆ "ಜನ"ಸಾಮಾನ್ಯ"ರಲ್ಲ

ನೋವು

ಬರುವಾಗ ನಗುತ್ತ ಬಂದು
ಹೋಗುವಾಗ ನೀಡಿದ್ದು
ನೋವು
ಪ್ರೀತಿಯ ಹಸಿವನ್ನು
ತಣಿಸುವೆ ಎಂದುಕೊಂಡರೆ
ನೀನು ನೀಡಿದ್ದು
ನನ್ನ ಆಸೆ ಆಕಾಂಕ್ಷೆಗಳಿಗೆ ಸಾವು

ತೆರವು

ಅತಿಕ್ರಮಣ ತೆರವು
ಮಾಡಲು ಹೋದಾಗ
ಪ್ರತಿಭಟನೆ
ನಡೆಯುವುದು
ನಡೆಯಬಾರದ ಘಟನೆ
ನಂತರ ಹೋರಾಟಕ್ಕೆ
ಬರುವುದು ಹಲವು ಸಂಘಟನೆ

ಸಜ-ಮಜ

ದಿಲ್ ಗೆ
ಪ್ಯಾರ್ ಆಗಿ
ಶಾದಿ ಮೇ ಬದಲಾಗಿ
ಜಿಂದಗಿ
ಶುರುವಾದ್ರೆ
ಮಜ
ಅದೇ
ದಿಲ್ ದಾರ್ ಕೈ ಕೊಟ್ರೆ
ಜಿಂದಗೀ ಪೂರ್ತಿ
ಸಜ

ತುಕಡಾ-ಮುಕಡಾ

ಅಂದ್ಕೊಂಡಿದ್ದೆ
ಅವಳನ್ನಾ
ಪ್ಯಾರ್ ಕಾ ತುಕಡಾ
ಆದ್ರೆ ಅವಳಾಗಿದ್ಲು
ಚೋಟಾ ಶೈತಾನ್ ಕಾ ಮುಕಡಾ

ರಾಜ

ಅವಳಿದ್ದರೆ ಬಾಜು
ನಾನು ರಾಜ
ಇಲ್ಲದಿದ್ದರೆ
ಎಂದೂ ತೆರೆಯದು
ಪ್ರೀತಿಯ ದರ್ವಾಜ

ಇನಿಯ

ಇನಿಯನ
ಸನಿಹವಿರಲು
ಸವಿ
ದೂರವಿರಲು
ಆಗಸದಲ್ಲೇ
ಇರುವ
ರವಿ

ಇನಿಯ

ಇನಿಯನ
ಸನಿಹವಿರಲು
ಸವಿ
ದೂರವಿರಲು
ಆಗಸದಲ್ಲೇ
ಇರುವ
ರವಿ

ಇನಿಯ

ಇನಿಯನ
ಸನಿಹವಿರಲು
ಸವಿ
ದೂರವಿರಲು
ಆಗಸದಲ್ಲೇ
ಇರುವ
ರವಿ

ಪ್ರೀತಿ-ಭೀತಿ

ಅವನು
ಕರೆಯುವಾಗ
ಅವಳಲ್ಲಿ
ಪ್ರೀತಿ
ಅವಳು
ಮರು
ಮಾತನಾಡದಿರಲು
ಶುರುವಾಗುವುದು
ಭೀತಿ

ಚಳಿ-ಬಿಸಿ

ಮಳೆ ಬರಲು
ಚಳಿಯಾಯಿತು
ಅವಳು ಬರಲು
ಬಿಸಿಯಾಯಿತು

ದಮ್ಮು

ಅವರಿಗೆ ಕೆಮ್ಮು
ಅದರ ಜೊತೆ ಇದೆ "ದಮ್ಮು"
ಹಿರಿಯ ದಿನಗಳಲ್ಲಿ
ನಡೆದಾಡಲು ಇಲ್ಲ "ದಮ್ಮು"
ಆದರೂ ಎಳೆಯುವರು "ದಮ್ಮು"

ಬೆಂಬಲ

ಬೇಶರತ್ ಬೆಂಬಲ
ಪಡೆದು
ಬೇಶರಮ್ ನಿಂದ
ಬೆಂಬಲ ವಾಪಸ್
ಪಡೆದರೆ
ಉಳಿಯುವುದು
ಗರಮ್ ಗರಮ್ ಮಾತುಕತೆ

ವಿಶ್ವನಾಥ

ಗೆದ್ದರೆ ವಿಶ್ವನಾಥ
ಸೋತರೆ
ಅನಾಥ
ಆದರೂ ಸಾಗುತಿರಲಿ
ವಿಜಯ ಪಥ

ಕೆಂಪುದೀಪ

ಕೆಂಪುದೀಪಕ್ಕೆ
ನಿರ್ಬಂಧ
ಸಿಟ್ಟಾಗಿದೆ ರಾಜಕೀಯ
ವೃಂದ
ಅವರಿಗೆ ಕೆಂಪುದೀಪವೇ
ಅಂದ
ಆದರೆ ತೀರ್ಪು ಬಂದಿರುವುದು
ಸುಪ್ರೀಮ್ ನಿಂದ

ಕೆಪಿಎಸ್ಸಿ

ಕೆಪಿಎಸ್ಸಿ
ಬಳಿದುಕೊಂಡಿದೆ ಮಸಿ
ತನಿಖೆಯು ಹುಸಿ
ನಿರ್ಧಾರ ಕೈಗೊಳ್ಳಲು
ಸರ್ಕಾರಕ್ಕೆ ಕಸಿವಿಸಿ

ಅರಣ್ಯ ನಾಶದ ಪರಿಣಾಮ

ಪದೇ ಪದೇ ಆನೆ
ನಾಡಿಗೆ ಬಂದಾಗ ಏನನಿಸುತ್ತದೆ?
ಆನೆ ನಾಡನ್ನೇ
ನನ್ನ ಮನೆ
ಎಂದುಕೊಂಡಿದೆ
ಅನಿಸುತ್ತದೆ