Followers

About Me/ನನ್ನ ಬಗ್ಗೆ

Tuesday, November 19, 2013

ಹೌದಲ್ವಾ?

ಅಂದು ಹೇಳಿದ್ದು ಅವರು
ಬಡವರೆಲ್ಲರೂ
ನನ್ನ ಅಣ್ಣ ತಮ್ಮಂದಿರಂತೆ!
ಸರಿಯಾಗಿಯೇ ಇದೆ
ಚುನಾವಣೆಯ ಮೊದಲು
ಅಣ್ಣತಮ್ಮಂದಿರು
ನಂತರ ದಾಯಾದಿಗಳು!

ಖಾತರಿ-ಕ್ಯಾತೆ-ರಿ

ಒಳ್ಳೆಯ ಯೋಜನೆ ಉದ್ಯೋಗ ಖಾತರಿ
ಅದ್ರಲ್ಲೂ ತೆಗೀತಿದಾರೆ ಕ್ಯಾತೆ ರೀ
ಸಿಗುತ್ತಿಲ್ಲ ಕೆಲಸ ಮಾಡಿದವರಿಗೆ ದುಡ್ಡು
ಆಶ್ವಾಸನೆ ಕೊಡುತ್ತಿದ್ದಾರೆ ಗೊಡ್ಡು

ಕಾಡಿದ ಪ್ರಶ್ನೆ

ಸರ್ಕಾರಿ ಆಸ್ಪತ್ರೆ ಜನರಲ್ ವಾರ್ಡು
ಏಟಿಎಮ್ ಸೆಕ್ಯೂರಿಟಿ ಗಾರ್ಡು
ಎರಡು ಒಂದೇ ರೀತಿ ಕೆಲಸ ಮಾಡ್ತಾವಾ?

ಗೊತ್ತಿಲ್ಲಾ!!!!!!!!

ವಿಸ್ತರಣೆ ಸದ್ಯಕ್ಕಿಲ್ಲ
ಏಕಿಲ್ಲ?
ನಮಗೆ ವಿವಾದ ಬೇಕಿಲ್ಲ
ಮತ್ತೆ ಕೆಲ್ಸಾ ಆಗ್ಬೇಕಲ್ಲಾ?
ಅದಕೆ ನಾವಿದ್ದೀವಲ್ಲಾ
ನಿಮ್ಮಿಂದ ಇನ್ನೂ ಏನೂ ಆಗಿಲ್ಲ
ಅವರಿಂದಾನೂ ಎನೂ ಆಗಲ್ಲ!
ಮತ್ತೆ ಹೇಳಿಕೆ ಕೊಟ್ರಲ್ಲಾ?
ನಾವು ಕೊಟ್ಟಿಲ್ಲ
ನಮ್ಗೆ ಆ ವಿಷಯಾನೇ ಗೊತ್ತಿಲ್ಲಾ!!!!!!!!

ಮನ

ಕವಿಯ ಮನ
ಅರಿಯಲು
ಕವಿತೆ ಸಾಕು!
ಕುವರಿಯ ಮನ
ಅರಿಯಲು
ಕಾಯಬೇಕು!

ಯೋಚನೆ

ಪತಿಗೆ ಸತಿ
ಸರಿಯಾಗಿರಲು
ಅನಿಸುವರು
ದಂಪತಿ!
ಇಲ್ಲದಿದ್ದರೆ
ಸರಿಯಿರದು
ಅವರ ದಂತಪಂಕ್ತಿ!
(ಅತಿಶೋಯಕ್ತಿಯಲ್ಲಿ ಬರೆದಿದ್ದು)

ಕಪ್ಪು-ಬಿಳುಪು

ಕೊರೆವ ಚಳಿಯಲ್ಲಿ
ಸುರಿಯುವ ಮಳೆಯಲ್ಲಿ
ಸುಡು ಬಿಸಿಲಿನಲ್ಲಿ
ನಿನದೇ ನೆನಪು
ಕಣ್ಣು ಮುಂದೆ ಬರುವ
ಆ ನಿನ್ನ ರೂಪ ಕಪ್ಪು-ಬಿಳುಪು

ಎಂಟರ ಗಂಟು

ಸಮಸ್ಯೆ ನೂರೆಂಟು
ಕೆಲವರಾಗುವರು ಸೆಂಟಿಮೆಂಟು
ಇನ್ನು ಕೆಲವರು ಮಾಡುವರು ಕಮೆಂಟು
ಕೆಲವರಿಗೆ ಸಾಕು ಸರಿಯಾಗಲು ದಿನ ಎಂಟು
ಇನ್ನು ಕೆಲವರಿಗೆ ಸಮಸ್ಯೆ ಇರುವುದು ಪರಮ್ ನೆಂಟು

ನಮ್ಮವರು

ಸವಾಲಿಗೆ ಸವಾಲು
ಹಾಕಿ ಪ್ರಶ್ನೆ ಕೇಳಿ
ಕಾಡುವ ಮಾಧ್ಯಮದವರು,
ನಂತರ ಅದನ್ನೇ
ಹೇಳಿಕೆ ಅನ್ನುವರು,
ನಂತರ ಅದಕ್ಕಾಗಿ
ಒಂದು ಸಂವಾದವನ್ನು
ಏರ್ಪಡಿಸಿ
ತಮ್ಮ ಟಿಆರ್ ಪಿ ಯನು
ಹೆಚ್ಚಿಸುವರು!
ಇವರು
ನಮ್ಮವರು

ಅವಳು

ಅವಳಿಗಾಗಿ
ನಾನು ಹಾಕಿಸಿದ್ದು
ಬರೀ ಕರೆನ್ಸಿ
ಆದರೂ ಮಿಸ್ ಕಾಲ್
ಕೊಡುವಳು
ಏನಾದರೂ ಇದ್ದರೆ ಎಮರ್ಜನ್ಸಿ

ಗಳಿಕೆ

ಅವಳ ಜೊತೆ
ಸುತ್ತಿದ್ದರಿಂದ
ಅವಳು ಸಿಗಲಿಲ್ಲ
ಟೂರಿಸ್ಟ್ ಗೈಡ್
ನೌಕರಿ ಸಿಕ್ಕಿತು!

ವಿಸ್ತರಣೆ

ಈಗ ಸಂಪುಟ ವಿಸ್ತರಣೆ
ತಾ ಮುಂದು ನಾ ಮುಂದು ಹೋಗುವ
"ಜನರನು" ಕಂಡಾಗ ಅನಿಸುತಿದೆ
ಪ್ರವಾಹ ಸಂತ್ರಸ್ತರಿಗೆ ಆಗುತಿದೆ
ಆಹಾರ ಪೊಟ್ಟಣಗಳ ವಿತರಣೆ

ಕನ್ನಡ

ಕನಕನ ಕನ್ನಡ ನುಡಿಯಲ್ಲಿರಲು
ಕನ್ನಡ ಮಾತೆ ಅಂದ!
ಕುಮಾರವ್ಯಾಸನ ಕನ್ನಡ ನೆನೆಯಲು
ಕನ್ನಡ ಮಾತೆಗೆ ಆನಂದ!
ಕಿಲ ಕಿಲ ಕಂದನು ಕನ್ನಡ ನುಡಿಯಲು
ಕನ್ನಡಮ್ಮನಿಗೆ ಅತ್ಯಾನಂದ!
ಕನ್ನಡ ಕುಲವೆಲ್ಲ ಕನ್ನಡವೆನ್ನಲು
ಕರ್ನಾಟಕವದು ಚಂದ!

ಅಭಿನಂದನೆ

ಪ್ರಶಸ್ತಿ ಬಂದಿದ್ದಕ್ಕೆ
ಅಭಿನಂದನೆ
ಹೇಳಿಕೆ ನೀಡಿದ್ದಕ್ಕೆ
अभि ನಿಂದನೆ

ಗಳಿಕೆ

ಪ್ರಶಸ್ತಿ ಬಂದದ್ದು ಹೆಗ್ಗಳಿಕೆ
ಬೇಕಾಗಿತ್ತು ಹೊಗಳಿಕೆ
"ಅ(ಪಾ)ರ್ಥ" ಮಾಡಿಕೊಂಡಿದ್ದು ಹೇಳಿಕೆ
ಈಗ ಬರೀ ತೆಗಳಿಕೆ
ಅನಿಸುತಿದೆ ತೆ-ಗಳಿಕೆ

ಶಾಂತಿ-ಕ್ರಾಂತಿ

ಅವಳಲ್ಲಿ ನಾ ಕಂಡಿದ್ದು
ಕಾಂತಿ
ಹೆಸರು ಶಾಂತಿ
ಆಯಿತು ಪ್ರೇಮದ ಭ್ರಾಂತಿ
ಈಗ ಅವಳಪ್ಪನಿಂದ
ಶುರುವಾಗಿದೆ
ಕ್ರಾಂತಿ
ಒಳ್ಳೆಯ ತಲೆಬರಹ
ಶಾಂತಿ-ಕ್ರಾಂತಿ

ಸುಮ್ನೆ ಅನಿಸಿದ್ದು

ನಿಮ್ಗೆ ಅನಿಸಿದ್ದನ್ನು ಸಹ ಬರೆಯಿರಿ
ತಪ್ಪಿಗೆ ತಿದ್ದಿ, ಇಲ್ಲದಿದ್ದರೆ ಒಪ್ಪಿ!

ಓದು ಒಕ್ಕಾಲು ಬುದ್ಧಿ ಮುಕ್ಕಾಲು
ನೆನೆಪಾಗದು ಪುಸ್ತಕದ ನಾಲ್ಕು ಸಾಲು!
ಅದೇ ಬಾಯಲ್ಲಿರುವುದು ಸಿನಿಮಾದ ಪೂರ್ತಿ ಹಾಡು

ಎತ್ತು ಏರಿಗೆ, ಕೋಣ ನೀರಿಗೆ!
ಮೂಢನಂಬಿಕೆ ವಿರೋಧ ಕಾಯ್ದೆಗೆ ತಯಾರಿ,
ಕಡಿದ್ರು ಮಾಟ ಮಂತ್ರಕ್ಕಾಗಿ ನೂರು ಕುರಿ-ಕೋಳಿ

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ!
ಗಣಿಲೂಟಿಗೆ ವರುಷ, ಸಿಬಿಐ ಗೆ ನಿಮಿಷ

ಹುಟ್ಟು ಗುಣ, ಸುಟ್ಟರೂ ಹೋಗದು!
ನಿಮಗೆ ಗೊತ್ತುಂಟಾ? ನಮ್ಮವರು ಎಂದೂ ನಗುವುದನ್ನಾ ಬಿಡರು

ಕರೆ

ದಿನಬೆಳಗಾದರೆ
ನೋಡುವ ದಿನಪತ್ರಿಕೆ, ಸುದ್ದಿವಾಹಿನಿ
ನೋಡಿ ಆಗುತ್ತಿದೆ
ಬೇಸರ
ಬದಲಾವಣೆಗಾಗಿ
ಮನ ಬಯಸುತಿದೆ
ದಿನ ದಿನವೂ ಹೊಸ ವಿಚಾರ
ಹೊಸ ಸುದ್ದಿಗಾಗಿ
ಮನ ಮಿಡಿಯುತಿದೆ
ಸಾಧನೆಗಾಗಿ ತುಡಿಯುತಿದೆ
ನೀ ಬದಲಾಗು ಎಂದು
ಪ್ರತಿದಿನ ಕರೆಯುತಿದೆ

ವಿದಾಯ

ಚೀನಾದಲ್ಲಿ
ಒಂದು ಮಗುವಿನ
ನೀತಿಗೆ ವಿದಾಯ
ತುಂಬಾ ಬಂದಿತ್ತಂತೆ
ದಂಡ ಶುಲ್ಕದಲ್ಲಿ ಆದಾಯ
ಆದರೆ ಲಿಂಗಾನುಪಾತ
ಆಗಿತ್ತು ಮಾಯ
ಈಗ ಸಿಗಬಹುದು
ಮಾತೃತ್ವಕ್ಕೆ ನ್ಯಾಯ

ನೆನಪು

ಮರೆತು ಹೋದ
ಕವನದ ಸಾಲು
ನೆನಪಾಗಲು
ಅವಳ ನೆನಪು
ಕಾಡಿತು
ಸಾಲು ನೆನಪಾಗಿ
ಖುಷಿಯಾದರೂ
ಅವಳ ನೆನಪಾಗಿ
ಮುಖ ಬಾಡಿತು
ಮತ್ತೆ ಮತ್ತೆ ಕಾಡಿತು

Sunday, November 17, 2013

ನವೆಂ"ಬರ"

ಕನ್ನಡ ಕಾರ್ಯಕ್ರಮ ತುಂಬಿರುವ
ತಿಂಗಳು ನವೆಂ"ಬರ"
ಅದಾದ ನಂತರ ಇವೆಲ್ಲವುದಕ್ಕೂ
"ಬರ"

ಸಂ"ವೇದನೆ"

ಸರಸ
ವಿರಸಗಳ
ನಡುವೆ
ಮನಸುಗಳ
"ವೇದನೆ"
ಇದ್ದರೆ
"ಸಂವೇದನೆ"
ಫಲಿತಾಂಶ
"ಸಾಧನೆ"
ಇಲ್ಲದಿದ್ದರೆ
ಸಮಸ್ಯೆಗಳಿಗೆ
ಇರದು
"ಕೊನೆ"

ಮೂಢನಂಬಿಕೆ

ಮೂಢ ನಂಬಿಕೆ ವಿರುದ್ಧ
ಬೇಕು ಹೋರಾಟ!
ಆದರೆ ಈಗ ಬರೀ ಮಾತಿನಲ್ಲೇ
ನಡೆಯುತಿದೆ ಹಾರಾಟ!
ನಾಯಕರ ಮಧ್ಯೆ ಕಾದಾಟ!
ಮತ್ತೆ ಪಕ್ಕದ ರಾಜ್ಯಕ್ಕೆ ಹೋಗಿ
ಮಾಡಿಸುವರು ಮಂತ್ರ ಮಾಟ!

ಬಿದಾಯಿ

ಬೇಕೋ ಬೇಡವೋ ಗೊತ್ತಿಲ್ಲ
ಆದರೆ ಅವರಿಗೆ ಬೇಕೆನಿಸುವುದಿಲ್ಲವೇ ಸಫಾಯಿ
ಬೇರೆ ರಾಜ್ಯದಲ್ಲಿ ಶೌಚಾಲಯಕ್ಕಾಗಿ
ವರನನ್ನೇ ದಿಕ್ಕರಿಸಿದಳು ಒಂದು ಹೆಣ್ಣು
ಅದನು ನೋಡಲು ಸಾಕಿಲ್ಲವೇ ಎರಡು ಕಣ್ಣು

ಕಣ್ಣೀರು

ಅವಳ ಕಣ್ಣೀರನು
ಒರೆಸುವ ಬದಲು
ಅವರು ಹೇಳಿದ್ದು
ಅದಕೆ ಅವಳ ವೇಷಭೂಷಣ ಕಾರಣ!
ಅವರಿಗೇನು ಗೊತ್ತು
ಕಳೆದು ಹೋಗುತಿದೆ
ಈ ರೀತಿಯ ಭಯದಲ್ಲಿ ಅವಳ ತಾರುಣ್ಯ!

ಮೋದಿ-ಮೋಡಿ

ಮೋದಿ
ಮಾಡುವರೋ
ಮೋಡಿ
ಮಳೆ ಬಂದರೆ ಜನ ಹೋಗುವರು
ಓಡಿ
ಇಲ್ಲದಿದ್ದರೆ
ಸಿಳ್ಳೆ ಚಪ್ಪಾಳೆ ಅವರನ್ನು
ನೋಡಿ

ಹೆಚ್ಚು-ಹುಚ್ಚು

ಇತ್ತೀಚಿಗೆ
ಅಪಘಾತ ಹೆಚ್ಚು
ಕಾರಣ
ವೇಗವಾಗಿ ಚಾಲನೆ
ಮಾಡುವ ಹುಚ್ಚು

ವಾದ-ವಿವಾದ-ಸಂವಾದ

ಅವರು ಹೋದಲೆಲ್ಲ
ಮಾಡುವರು
ವಾದ
ಅದರ ಫಲಿತಾಂಶ
ವಿವಾದ
ನಂತರ ಸರಿಪಡಿಸಲು
ಕರೆಯುವರು ಸಂವಾದ

ವಿತಂಡವಾದ

ನಮ್ಮಲ್ಲಿ ಹಲವು ರೀತಿಯ ವಾದ
ಒಬ್ಬರದು ಬರೀ ವಾದ
ಇನ್ನೊಬ್ಬರದು ವಿವಾದ
ಕೆಲವರದು ಸಂವಾದ
ಉಳಿದವರದು ವಿತಂಡವಾದ

ಹೌದಾ?

ಏನಾದರೂ ಗೀಚಬೇಕು
ಅದಕ್ಕೆ ಏನಾದರೂ ತೋಚಬೇಕು
ತೋಚಿದ್ದು ಗೀಚಿದಾಗ ಆಗುವುದು ಗೀತೆ(?)

ಅವಳು

ಬಲು ಚಂದ ಅಧರ
ಮಾತು ಮಧುರ
ದನಿ ಸುಮಧುರ
ಆಗಿ ಬಿಟ್ಟಳು ನನ್ನಿಂದ ದೂ..........ರ
ಈಗ ನಾನೊಂದು ತೀರ, ನೀನೊಂದು ತೀರ
ನೋಡುತಿರುವೆ ನಾನು ಕನಸಿನ ತೇರ

ಆ ರಾತ್ರಿ

ಇಳೆ ನೋಡಿ
ಮಳೆ ಬರಬಹುದೆಂದು
ಗೆಳೆಯನ/ಗೆಳತಿಯ ನೆನಸಿ
ಮನೆ ಸನಿಹ ನಡೆಯಲು
ಜೋರಾಗಿ ಬಂತು ಮಳೆ!
ಮೈಯೆಲ್ಲಾ ಆಯಿತು ಕೊಳೆ
ಹಳೆಯ ನೆನಪುಗಳು
ಎಳೆಎಳೆಯಾಗಿ
ನೆನೆಯುತಿರಲು
ರಾತ್ರಿ ಕಳೆದು
ಮೊಗದಲಿ ಬಂದಿತ್ತು ಕಳೆ!

ಆಸರೆ

ಕತ್ತಲೆಯ
ಕನಸಿನಲಿ
ಕಾಣಿಸಿ
ಕಣ್ಣಲ್ಲೇ
ಕೆರಳಿಸಿ
ಕಡೆಗಣಿಸಿ
ಕೆಣಕುವ
ಕುವರಿಯ
ಕಂಡು
ಕಾರಣ
ಕೇಳಿ
ಕನಸನು
ನನಸಾಗಿಸಲು
ಬೇಕು
ಚೆಲುವೆ ನಿನ್ನ ಆಸರೆ!

Tuesday, November 12, 2013

ಅಪ್ಸರೆ

ಅವಳ ನೋಡುತ ನಿಂತ
ಅವನಿಗೆ
ಅನಿಸಿದ್ದು
ಅವಳು ಭೂಲೋಕದ ಅಪ್ಸರೆ
ಆಗಿಬಿಟ್ಟೆನಾ ನಾ ಅವಳ ಸೆರೆ

ಭಾಗ್ಯ

ಆ ಭಾಗ್ಯ ಈ ಭಾಗ್ಯ
ನೋಡಿ ಸಾಕಾದ
ಹಣ್ಣು ಮುದುಕಿ ಹೇಳಿದ್ದು!!!!!
ಯಪ್ಪಾ ಎಲ್ಲಾ ಬರ್ತೈತೆ
ನನಗೇನೈತೆ ಮಣ್ಣು?
ವಿಧವಾ ವೇತನ ಇಲ್ಲಾ
ಓಲ್ಡ್ ಏಜ್ ಪೆನ್ಶನ್ ಇಲ್ಲಾ
ರೇಶನ್ ಅಂತೂ ಸಿಗಾಂಗಿಲ್ಲ
ಮನೆಯಾಗ್ ಒಂದೂ ಲೈಟ್ ಉರಿಯಾಂಗಿಲ್ಲ!
ನನ್ ಬಾಳ್ ಕೊನೆ ದಿನಾ ಎಣಿಸ್ತಾ ಇರೋ ನನಗೆ
ಇಲ್ಲ ಈ ರೀತಿ ಭಾಗ್ಯ
ಬರೀ ತುಂಬಿದೆ ದೌರ್ಭಾಗ್ಯ

ದು(ದೂ)ರಾಲೋಚನೆ

ಪವರ್ ಕಟ್ ಆಗಿ ಫ್ಯಾನ್ ಗಾಳಿ ಬೀಸಲಿಲ್ಲ
ಅವರಿಗೆ ಸಾಕಾಗಿದೆಯಂತೆ ಈಗ ಕಮಲ
ನಾಯಕರು ಆಗಲೇ ಕೊಟ್ಟಿದ್ದಾರಂತೆ ಕೈ
ತೆನೆಗೂ ಗಣಿಗೂ ಅರ್ಧಚಂದ್ರ
ಅದಕೆ ಅವರ ದೃಷ್ಟಿ ಸೈಕಲ್ಲಿನ ಮೇಲಾಗಿದೆ ಕೇಂದ್ರ

ಗಾದೆ

ಅಕ್ಕಿ ಮೇಲೆ ಆಸೆ
ನೆಂಟರ ಮೇಲೆ ಪ್ರೀತಿ
ಹಳೆ ಗಾದೆ
ಮಗಳ ಕಂಡರೆ ಪ್ರೀತಿ
ಅಪ್ಪನ ಕಂಡರೆ ಭೀತಿ
ಹೊಸ ಗಾದೆ

ಆಕಿ-ಆತ

ಆಕಿ
ನಕ್ಕಿದ್ರೂ ಚಂದಾ
ಕೆಮ್ಮಿದ್ರೂ ಚಂದಾ
ಏಕೆಂದ್ರೆ ನೋಡುಗನ ಕಣ್ಣಲ್ಲಿದೆ ಆನಂದ
ಆತ
ನೋಡಿದ್ರೂ ಕಷ್ಟ
ಕೇಳಿದ್ರೂ ನಷ್ಟ
ಏಕೆಂದ್ರೆ ಅವಳ ಮನಸಿಗೆ ಅನಿಸಿದೆ ಅವನು ದುಷ್ಟ

Monday, November 11, 2013

ಟ್ರಾಫಿಕ್ಕು-ಕಿರಿಕ್ಕು

ದಿನವೂ ಟ್ರಾಫಿಕ್ಕು
ಆಯಾಸ ಟೆರಿಫಿಕ್ಕು
ಅಪ್ಪಿತಪ್ಪಿ ಟ್ರಾಫಿಕ್ ಪೋಲೀಸ್ ಸಿಕ್ಕರೆ
ಶುರು ಮಾಡುವನು ಕಿರಿಕ್ಕು

ನಾರಿ-ಮಾರಿ-ಮಾರಾಮಾರಿ

ಆ ಮನೆಯಲ್ಲಿ ಮಾರಾಮಾರಿ
ಕಾರಣ
ನಾರಿ ಮುನಿಸಿ
ಆಗಿರುವಳು ಮಾರಿ!
ಗಂಡ ಕುಡಿದು ಬಂದಿರುವನು
ಅವಳ ಒಡವೆಯನು ಮಾರಿ!
ಅದಕೆ ಹಿರಿಯರು ಹೇಳಿದ್ದು
ಒಲಿದರೆ ನಾರಿ, ಮುನಿದರೆ ಮಾರಿ
ಒಂದು ಜೋಡಣೆ
ನಡೆಯುವದು ಮಾರಾ"ಮಾರಿ"

ನಿಜಾ ಕಣ್ರೀ

ನಡೆದರೆ ರ್ಯಾಲಿ
ಜನರು ಬರಲು ಕಳಿಸುವರು ಲಾರಿ!
ಬರಲು ನಾರಿ
ಕೊಡುವರು ಸ್ಯಾರಿ!
ಬರಲು ಬಾರಿಬಾರಿ
ಬಾಟಲಿ ಭಾರಿ ಭಾರಿ!
ಅದಕೆ ಎಲ್ಲರೂ ಎಲ್ಲರಿಗೂ ಆಭಾರಿ!

ದಂ"ಪತಿ"

ಮುನಿಸಿಕೊಂಡು
ಮಾತನಾಡದಿರುವ
ಮಡದಿಯ
ಮೌನವರಿತು
ಮನದಲ್ಲೇ
ಮರುಗದೇ
ಮನ್ನಿಸಿ
ಮೆಚ್ಚಿಸಿ
ಮುಖದಲ್ಲಿ
ಮುಗುಳ್ನಗೆ
ತರಿಸುವ ಪತಿಯಿರಲು
ಸತಿ-ಪತಿಯಾಗುವರು
ಮಾದರಿ
ದಂ"ಪತಿ"

ಕೋಲಾಹಲ

ಅವಳು ಕಮಲಾ
ನೋಡಲು ಕೋಮಲ
ಇಷ್ಟಪಟ್ಟೆ ಅವಳಾ
ಈಗ ಇಬ್ಬರ ಮನೆಯಲ್ಲೂ ಕೋಲಾಹಲ

ಸಬ್ಸಿಡಿ

ಸಬ್ಸಿಡಿ ರೈತರ ಖಾತೆಗೆ
ಹೇಳುತ್ತಿದ್ದರಂತೆ ಹಿಂದೆ
ಸಬ್ಸಿಡಿ ಕೊಡಲು ನೀ
ಗರಿಗರಿಯ ಗಾಂಧಿ ನೋಟು ತೆಗೆ

ಸಮಾಧಾನ

ಬೆಚ್ಚಿ ಬೀಳಿಸುತಿರುವ ಸುದ್ದಿಗಳು
ದಟ್ಟವಾಗಿ ಇರುವಾಗ
ನಿದ್ದೆ ಬರದು ರಾತ್ರಿ!
ಕೊಚ್ಚಿ ಬಿಡುವರೋ ಇಲ್ಲ
ಚುಚ್ಚಿ ಬಿಡುವರೋ ಎಂಬ ಭಯ!
ದಿನ ಬೆಳಗಾದರೆ ಕೊಲೆ
ಅತ್ಯಾಚಾರ, ಅನಾಚಾರ, ಬ್ರಷ್ಟಾಚಾರ
ಸುದ್ದಿವಾಹಿನಿಗಳಲಿ!
ದೇವನಿರುವನೆಂಬ ನಂಬಿಕೆಯಲಿ
ಸಾಗುತಿರುವ ಪಯಣದಲಿ
ಹಲವು ಅಗ್ನಿ ಪರೀಕ್ಷೆ
ಆದರೂ ಕೊನೆಯಾಗುತ್ತಿಲ್ಲ ನಿರೀಕ್ಷೆ!
ಅದಕೆ ಪ್ರತಿದಿನ ಹೇಳುವೆ
ಗುರಿ ಮುಂದಿದೆ
ಸಾಧನೆಯೊಂದೇ ಸಮಾಧಾನ!

ದೊ(ದ)ಡ್ಡ ಜನ!


ಕ(ರ್ನಾಟಕ)


(ಅಪ)ನಂಬಿಕೆ


ಚಿಲ್ಲರೆಬುದ್ಧಿ


ಪೆನ್ನು - ಗನ್ನು

ಲೇಖಕರ ಪೆನ್ನು
ಯೋಧನ ಗನ್ನು
ಸರಿಯಾಗಿ ಇರಲು
ಇರದು ಯಾರಿಗೂ ಟೆನ್ಶನ್ನು

ಕಾಫಿ - ಕಾಪಿ

ಅವನು ಕುಡಿಯುವನು
ಪ್ರತಿದಿನ ಕಾಫಿ
ಭ್ರಮೆ ಹೊಡೆಯಬಹುದೆಂದು
ಪರೀಕ್ಷೆಯಲಿ ಹೆಚ್ಚು ಕಾಪಿ

ಸು(ರು)ಳಿ

ಅಂದು ಮಾಡುವಾಗ ಎಚ್ಚರವಿರಲಿಲ್ಲ
ರಾಶಿ ಹಾಕಿದರು ನೋಟುಗಳನು
ಗಣಿ, ಅತಿಕ್ರಮಣ, ಅಕ್ರಮಗಳಿಂದ
ಇಂದು ತಿರುಗಿ ಬಂದಿದೆ
ಸುಳಿಯಂತೆ
ಲೋಕಾಯುಕ್ತದ ಸುರುಳಿಯಲ್ಲಿ
ಸಿಲುಕಿ ನಲುಗುತಿರುವುದ ನೋಡಿದಾಗ
ನೆನಪಿಗೆ ಬರುತಿದೆ ಸಾಲು
ಮಾಡಿದ್ದುಣ್ಣೋ ಮಹಾರಾಯ

ಸಾಧನೆಯೊಂದೇ ಸಮಾಧಾನ!

ಬೆಚ್ಚಿ ಬೀಳಿಸುತಿರುವ ಸುದ್ದಿಗಳು
ದಟ್ಟವಾಗಿ ಇರುವಾಗ
ನಿದ್ದೆ ಬರದು ರಾತ್ರಿ!
ಕೊಚ್ಚಿ ಬಿಡುವರೋ ಇಲ್ಲ
ಚುಚ್ಚಿ ಬಿಡುವರೋ ಎಂಬ ಭಯ!
ದಿನ ಬೆಳಗಾದರೆ ಕೊಲೆ
ಅತ್ಯಾಚಾರ, ಅನಾಚಾರ, ಬ್ರಷ್ಟಾಚಾರ
ಸುದ್ದಿವಾಹಿನಿಗಳಲಿ!
ದೇವನಿರುವನೆಂಬ ನಂಬಿಕೆಯಲಿ
ಸಾಗುತಿರುವ ಪಯಣದಲಿ
ಹಲವು ಅಗ್ನಿ ಪರೀಕ್ಷೆ
ಆದರೂ ಕೊನೆಯಾಗುತ್ತಿಲ್ಲ ನಿರೀಕ್ಷೆ!
ಅದಕೆ ಪ್ರತಿದಿನ ಹೇಳುವೆ
ಗುರಿ ಮುಂದಿದೆ
ಸಾಧನೆಯೊಂದೇ ಸಮಾಧಾನ!

ಕನ್ನಡ ಕಟ್ಟುವ ಕಾಯಕ

ಕನ್ನಡ ಕಟ್ಟುವ ಕಾಯಕದಲಿ
ಕೈ ಜೋಡಿಸಲು
ಕನಕವೆ ಬೇಕೆಂದಿಲ್ಲ
ಕೂಗುತಿರುವ ಕಂದನಿಗೆ ಕನ್ನಡ
ಕವಿತೆಯಲಿ ಕನ್ನಡ
ಕಾಯಕದಲಿ ಕನ್ನಡ
ಕೈಂಕರ್ಯದಲಿ ಕನ್ನಡ
ಕಣ್ ತೆರೆದರೂ ಮುಚ್ಚಿದರೂ ಮನದಲಿರಲಿ ಕನ್ನಡ!
ಕನ್ನಡಮ್ಮನಿಗೆ ಅದೇ ಸಾಕು! ಉಳಿಸಿ ಬೆಳೆಸಲು!

ದೀಕ್ಷೆ

ಎತ್ತಾಗ ಹೋಗಕ್ಕತ್ತೈತಿ ನಮ್ಮ ಸಮಾಜ
ದೀಕ್ಷೆ ಕೊಡ್ತಾರಂತಾ ಈ ಜನಾ ನಮಗಾ
ಗೊತ್ತಲ್ಲೇನ್ ಇವ್ರಿಗೆ
ಹೊಟ್ಟೆಗೆ ಊಟಾ ಇಲ್ದೇ ಸಾಯಾಕ್ ಹತ್ತಾರ್ ಜನಾ
ಇರ್ಲಿಕ್ಕ್ ಸೂರಿಲ್ಲಾ
ದೀಕ್ಷೆ ತಗಾಂಡೇನ್ ಮಾಡೋದ್ರಿ
ಅಲ್ಲಾ ಅದೇನ್ ಕಾಲೇಜ್ ಸರ್ಟಿಫಿಕೇಟಾ?
ಅದ್ ಕೊಟ್ರೆ ಏನ್ ಉದ್ಯೋಗ್ ಸಿಗ್ತೈತೇನ್ರಿ?
ನಿಜವಾಗ್ಲೂ ಭಾಳ್ ಬ್ಯಾಸ್ರ್ ಆಗ್ತೈತ್ರಿ
ನಮಗ್ ಇದೆಲ್ಲಾ ಬ್ಯಾಡ್ರಿ
ದಿನಾ ದ್ಯಾವ್ರಿಗೆ ಕೈ ಮುಗೀತೇವೆ
ಒಳ್ಳೆದಾಗ್ಲಿ ಅಂತಾ ಬೇಡ್ಕೊಳ್ತೇವೆ ಅಷ್ಟೇ!!!!!!!!!!!

ಪ್ರಸ್ತುತ

ಯೋಜನೆಗಳ
ಘೋಷಣೆ ಮಾಡುವ ಭರದಲಿ
ಮಾಡುತಿರುವರು ಹಲವರ ಪೋಷಣೆ
ಆತ್ಮಸಾಕ್ಷಿಯೊಂದಿದ್ದರೆ ಸಾಕಿತ್ತು
ಕಣ್ ತೆರೆದು ನೋಡಲು ಆಗುತಿರುವ ಶೋಷಣೆ
ಇರಬಹುದಾ ಕಾರಣ ಚುನಾವಣೆ
ಒಬ್ಬರ ಮೇಲೆ ಇನ್ನೊಬ್ಬರ ದೂಷಣೆ
ಸಮಾಜದಲ್ಲಿ ಎಲ್ಲ ರೀತಿಯ ಪ್ರದೂಷಣೆ
ಇಲ್ಲವೇ ಇದಕೆ ಕೊನೆ
ಯಾರು ಇದಕೆ ಹೊಣೆ

ಧಗಧಗ.........

ನಿಧಿಗಾಗಿ ಶೋಧ
ಶಾದಿ ಭಾಗ್ಯಕೆ ವಿರೋಧ
ಪ್ರತಿಭಟನೆಗಳು ವಿಧ ವಿಧ
ಎಲ್ಲಿ ನೋಡಿದರಲ್ಲಿ ಕಾಣುತ್ತಿದೆ ಕ್ರೋಧ

ಯಶಸ್ವಿ ಉಡಾವಣೆ

ಉಡಾವಣೆಯಾದಾಗ ರಾಕೆಟ್ಟು
ಭಾರತ ಸೇರಿತು ಕ್ಲಬ್ ಇಲೈಟು
ಆದರೆ ನಮ್ಮಲ್ಲಿ ಕೆಲವರು ಟ್ಯೂಬ್ ಲೈಟು
"ಜಾಸ್ತಿ ಆಯ್ತು ಕಾಸ್ಟು" ಅಂತ ಮಾಡ್ತಿದ್ದಾರೆ ಕಮೆಂಟು

ಅ(ವ)ಳು

ಅವಳು ಬಂದಳು
ಖುಷಿ ತಂದಳು
ಅವಳು ಹೋದಳು
ಕಥೆಯಾದಳು
ಪ್ರೀತಿಯಿಲ್ಲದ ಬದುಕು
ಉಪ್ಪಿನಕಾಯಿ ಹೋಳು
ಉಳಿದಿರುವುದು
ಬರಿ ಅ(ವ)ಳು

ಪ್ರೀತಿ

ಕುರುಡು ಪ್ರೀತಿಯ ನಂಬಿ
ಕರುಳು ಸಂಬಂಧವ ಕಡಿದು
ಕಡೆಗೆ ಕಾಣದಂತೆ ಮಾಯವಾದಾಗ
ಕಂಡಿದ್ದು ಕತ್ತಲೆಯ ಹಾದಿ

ಪರೀಕ್ಷೆ

ಹುಡುಗಿ ನೋಡಲು ಹೋದಾಗ
ಹುಡುಗ ನೋಡುತ್ತಿದ್ದ
ಹುಡುಗಿಯ ಮುಖ
ಹುಡುಗಿಗೋ ನಾಚಿಕೆ
ಅವಳು ಕೊಟ್ಟಿದ್ದು ಜ್ಯೂಸು
ಅವನು ಮಾಡಿಬಿಟ್ಟ ಅವಳ ಪಾಸು
ಮುಂದೆ ಆಗಿದ್ದೇ ಎಡವಟ್ಟು
ಹುಡುಗನಪ್ಪ ಕೇಳಿದ್ದು ಕಾಸು
ಹುಡುಗಿಯಪ್ಪನಾದ ರ್ಯಾಶು
ಹುಡುಗ ವಾಪಾಸು
ಈಗ ವಧುಪರೀಕ್ಷೆಯಲ್ಲಿ ಹುಡುಗನೇ ನಪಾಸು

ಚಿಲ್ಲರೆಬುದ್ಧಿ

ಚಿಲ್ಲರೆ ಕೊಡಲು
ಅಳುವರು ಬಸ್ ನಿರ್ವಾಹಕರು
ಒಂದೆರಡು ರೂಪಾಯಿ ಕೇಳಲು
ನಾಚಿಕೆ ಪಡುವರು ಪ್ರಯಾಣಿಕರು
ಪಾಪ ಅವರಿಗೇನು ಗೊತ್ತು
ಹನಿ ಹನಿ ಸೇರಿದರೆ ಹಳ್ಳವೆಂದು
ದಿನ ದಿನವೂ ಹೀಗೆ ಮಾಡಿ
ಕಟ್ಟುವರು ಮನೆಯನು
ಆ ಒಂದೊಂದು ರೂಪಾಯಿಯಿಂದ

ಕರ್ನಾಟಕ

ಉಳಿಯುವ ನಾಡು ಕರ್ನಾಟಕ
ಕುಡಿಯುವ ನೀರು ಕಾವೇರಿ
ತಿನ್ನುವ ಅನ್ನ ಕನ್ನಡಮ್ಮನದು
ನೆಲ ಜಲ ಉಸಿರು ಕನ್ನಡದಾಗಿರಲು
ಕನ್ನಡ ಮಾತನಾಡಲು
ಹಿಂಜರಿಯುವೇಕೆ ಗೆಳೆಯಾ?
ನುಡಿ ಕನ್ನಡ, ನಡೆ ಕನ್ನಡ ಎಂದು ಹಿರಿಯರು
ಹೇಳಿದ್ದು ನೆನಪಿಲ್ಲವೇ?

ಕನ್ನಡಮ್ಮ

ನಾಡು ನುಡಿಯ ಸೇವಕನಾಗಿ
ನಾಡಿಗಾಗಿ ಹೋರಾಡು ನೀ
ನಾಡಭಾಷೆಯ ಅರಿತು
ಆಡುಭಾಷೆಯ ಮಾತನಾಡು
ಅಂದಿನಿಂದ ಇಂದಿನವರೆಗೂ
ಸಾಗಿಬಂದ ಈ ಹಾದಿ
ಮುಂದಿನ ಪೀಳಿಗೆಯವರೆಗೆ ಇರಲಿ
ಕನ್ನಡಮ್ಮನ ಕರುಣೆ ನಮ್ಮಲರ ಮೇಲಿರಲಿ

ನಲ್ಲೆ

ನಲ್ಲೆ
ನೀನಿಲ್ಲದ
ಹೊತ್ತು
ಅನಿಸುತಿದೆ
ಸೂರ್ಯನಲ್ಲಿದ
ಜಗತ್ತು

ಎಂಥ ವಿಚಿತ್ರ

ಬಾಂಬ್ ಸ್ಫೋಟ ಆದ ತಕ್ಷಣ
ಮಾಡುವ ಮೊದಲ ಕೆಲಸ
.
.
.
.
.
.
.
.
ಈ ಕೃತ್ಯದ ಹೊಣೆಯನ್ನು ಈವರೆಗೂ ಯಾವ ಸಂಘಟನೆಯೂ
ವಹಿಸಿಕೊಂಡಿಲ್ಲ

ನಿಜ ಅಲ್ವಾ?

ಬಾಂಬ್ ಸ್ಫೋಟದ ನಂತರ
ರಾಜ್ಯದಲ್ಲಿ ಎಲ್ಲೆಡೆ
ಕಟ್ಟೆಚ್ಚರ
ಮಧ್ಯದಲ್ಲಿ ಏನೋ........
ಮತ್ತೆ ಬಾಂಬ್ ಸ್ಫೋಟದ ನಂತರವೇ
ಆಗುವುದು ಎಚ್ಚರ

ಬೇಕು-ಬ್ರೇಕು (ನಮ್ಮ ಗಾಡಿ ನಮ್ಮ ಡ್ರೈವರ್)

ನಮ್ಮ ಗಾಡಿ ತಳ್ಳ"ಬೇಕು"
ಮತ್ತೆ ತಳ್ಳಿ ಚಲಿಸತೊಡಗಿದರೆ ಇರದು "ಬ್ರೇಕು"
ಈಗ ನೀವೇ ಯೋಚಿಸಿ ಚಾಲಕನ ಸ್ಥಿತಿ ಹೇಗಿರ"ಬೇಕು"

ವರದಕ್ಷಿಣೆಯ ಪರಿಣಾಮ

ಮದುವೆಯ
ಮೊದಲು
ಅಂದದ
ದೀಪಾವಳಿ
ನಂತರ
ಮಾವ
ದಿವಾಳಿ

ಕಾರಣ

ಅವನು ಕುಡಿಯಲು ಕಾರಣ
ಟೆನ್ಶನ್ನು
ಅದಕೆ ಕಾರಣ
ಬರುತ್ತಿಲ್ಲ
ಪೆನ್ಶನ್ನು

ನೋಟ

ಮರುಳಾಗಿಸಿದೆ ಅವಳ ನೋಟ
ಈಗ ಪ್ರತಿದಿನ ತೆಗೆಯುತಿರುವನು
ಅವಳಿಗಾಗಿ ಗರಿಗರಿಯ ನೋಟ