Followers

About Me/ನನ್ನ ಬಗ್ಗೆ

Monday, September 30, 2013

ಕಾರಣ

ಗಂಡ ಬಂದಾಗ
ಹೆಂಡತಿಯ ಮುಖ
ಅರಳಲು ಕಾರಣ
ಅವನು ತಂದಿರುವ ಹೊಸ ಬಟ್ಟೆ
ಅದೇ ಮುನಿಯಲು ಕಾರಣ
ಆತ ಹಾಕಿರುವ ಕೊಟ್ಟೆ
(ಈಗ ಬಾಟಲ್ ಬಂದಿದೆ)

ಅಟೋಗ್ರಾಫ್


ಕನ್ನಡ ಮಾತಾಡುವ ಸಮಯ


ವ್ಹೀಲು-ವ್ಹೇಲು


ಟವರು-ಲವರು


ಸಂಸ್ಕೃತ


ಬಾಪು


ಭಗವಂತ


ಬಾಳದೋಣಿ


ಕೈ


ನೀರು
















ಸ್ವಾತಂತ್ರ್ಯ

ಕೇಳಿ ಕೇಳಿ ಸಾಕಾಗಿದೆ
ಅದೇ ಹಳೆಯ ಮಂತ್ರ
ತಂತ್ರ ಪ್ರತಿತಂತ್ರಗಳ
ನಡುವೆ ಒದ್ದಾಡುತ್ತಿದೆ ಸ್ವಾತಂತ್ರ್ಯ

ವರ್ಷ ವರ್ಷಕ್ಕೂ ಹೊಸ ಘೋಷಣೆ
ಕಾಣುತ್ತಿಲ್ಲ ಎಲ್ಲೂ ಸುಧಾರಣೆ
ಏರುತಿದೆ ವಸ್ತುಗಳ ಧಾರಣೆ
ನಿಂತಿಲ್ಲ ಬಡವರ ಶೋಷಣೆ

ಮಹಿಳೆಯರಿಗಿಲ್ಲ ರಕ್ಷಣೆ
ನಿಂತಿಲ್ಲ ವರದಕ್ಷಿಣೆ
ಅತ್ಯಾಚಾರಿಗಳಿಗಿಲ್ಲ ಎಣೆ
ಇದಕ್ಕೆಲ್ಲ ಯಾರು ಹೊಣೆ

ಇದ್ದರೂ ಸರ್ವ ಶಿಕ್ಷಾ ಅಭಿಯಾನ
ಹೆಚ್ಚುತ್ತಿಲ್ಲ ಮಕ್ಕಳ ಜ್ಞಾನ
ಕುಂಟುತ್ತಿದೆ ಸಾಕ್ಷರತೆ ಪ್ರಮಾಣ
ಆಗುತಿದೆಯೇ ನಿರಕ್ಷರಿಗಳ ತಾಣ

ಅತ್ತ ಉರಿಯುತಿದೆ ಗಡಿ
ನಿಂತಿಲ್ಲ ಭಯೋತ್ಪಾದನೆಯ ಕಿಡಿ
ಅಲ್ಲಿ ಯೋಧರ ಮರಣ
ಮಾತುಕತೆಯಲ್ಲಿ ಮಾಡುತಿರುವರು ಕಾಲಹರಣ

ಎಲ್ಲರಿಗೂ ಸಮಬಾಳು, ಎಲ್ಲರಿಗೂ ಸಮಪಾಲು
ಪ್ರತಿಯೊಂದು ಯೋಜನೆಗೂ ಬೇಕು ಅವರವರ ಪಾಲು
ಇಲ್ಲದಿದ್ದರೆ ಎಲ್ಲ ಕೆಲಸಕೂ ಕಾಲು
ನೋಡುತಿರುವೆವು ಕಛೇರಿಗಳಲಿ ಉದ್ದನೆಯ ಸಾಲು

ಒಂದೆಡೆ ಇಳಿಯುತಿದೆ ಅಂತರ್ಜಲ
ಹೆಚ್ಚುತ್ತಿದೆ ವರ್ಷ ವರ್ಷವೂ ಬರಗಾಲ
ರೈತರ ಬಾಳಲಿದೆ ಬರಿ ಸಾಲ
ಕುಡಿಯುವಂತೆ ಮಾಡಿದೆ ಹಾಲಾಹಲ

ಆದರೂ ಇದೆ ಸಾಧಿಸುವ ಛಲ
ಇದೆ ತೋಳುಗಳಲ್ಲಿ ಬಲ
ನಮ್ಮ ಶಕ್ತಿಯಲ್ಲಿದೆ ನಂಬಿಕೆ
ದಯೆ ತೋರುವಳು ಅಂಬಿಕೆ

ಎಜ್ಯುಕೇಶನ್

ತುಂಬಾ ದುಬಾರಿ ಎಜ್ಯುಕೇಶನ್
ಕೆಳುತ್ತಾರೆ ಹೆಚ್ಚಿಗೆ ಡೊನೇಶನ್
ಇದರಿಂದ ಏರಿದೆ ಪಾಲಕರ ಟೆನ್ಶನ್ನು
ಹಿಂದೆ ಸಾಕಾಗಿತ್ತು ಒಂದು ಪಟ್ಟಿ ಪೆನ್ನು

ಪಾಲಿಶ್- ಫೂಲಿಶ್

ಚಿನ್ನದ ಸರ ಮಾಡಲು ಬಂದ ಪಾಲಿಶ್
ಮಾಡುತ್ತೇನೆಂದ ಚೆನ್ನಾಗಿ ಮಾಲಿಶ್
ಅವನ ಮಾತು ಕೇಳಿ ಮಹಿಳೆ ಆದಳು ಫುಲ್ ಖುಶ್
ಸರವನ್ನೇ ಕದ್ದುಕೊಂಡು ಹೋಗಿ ಮಾಡಿದ ಮಹಿಳೆಗೆ ಫೂಲಿಶ್

ಮೇನಕೆ - ವನಕೆ

ಒಳ್ಳೆ ಮೂಡಿನಲ್ಲಿರುವಾಗ
ಅವಳು ಮೇನಕೆ
ಅದೇ ಕೋಪ ಬಂದಾಗ ಅನಿಸುವುದು
ಓಬವ್ವ ಹಿಡಿದಿರುವಳು ವನಕೆ

ಕಂದಕ

ಅವನು
ಮರಳಾದದ್ದು
ಅವಳ
ಅಂದಕ
ಆದರೆ
ಅವಳು
ಮೋಸ
ಮಾಡಿ
ತೋರಿಸಿದ್ದು
ಬಾಳಿನಲ್ಲಿ
ಮತ್ತೆ
ಹತ್ತಲಾಗದ
ಕಂದಕ

ತರ್ಕ - ಕುತರ್ಕ

ಪ್ರೀತಿಯಲ್ಲಿ ಬೇಡ
ತರ್ಕ
ಮಾಡಿದರೆ ಇತರರು
ಮಾಡುವರು
ಅದರ ಬಗ್ಗೆ
ಕುತರ್ಕ

ಕನ್ನ

ಅಂದುಕೊಂಡಿದ್ದೆ
ಅವಳು ನನ್ನ ಬಾಳಿನ ಚಿನ್ನ
ಅವಳ ಪಾಲಿಗೆ ಆಗಿದ್ದೆ ನಾನು ರನ್ನ
ಕದ್ದುಕೊಂಡು ಹೋಗಿಬಿಟ್ಟಳು ನನ್ನ ರೂಮಿನಲ್ಲಿರುವ ಚಿನ್ನ
ಹಾಕಿ ಬಿಟ್ಟಳು ನನ್ನ ಮನಸಿನ ಖಜಾನೆಗೆ ಕನ್ನ

ಅತ್ತ ದರಿ ಇತ್ತ ಪುಲಿ

ಅವಳು ಸುಂದರಿ
ನನ್ನ ಬಾಳಲ್ಲಿ ಬಂದ್ಳು ರಿ
ಅವಳಪ್ಪ ಅಣ್ಣನಿಗೆ ಒಪ್ಪಿಗೆ ಇಲ್ಲದೇ
ನನ್ನ ಸ್ಥಿತಿ
ಅತ್ತ ದರಿ ಇತ್ತ ಪುಲಿ

ದಸರಾ

ಅತ್ತ ಸಡಗರದ ದಸರಾ ಬೆಳಕಿನಲ್ಲಿ
ಇತ್ತ ಎಲ್ಲ ಹಳ್ಳಿಗಳು ಕತ್ತಲೆಯಲ್ಲಿ
ಆಡಂಬರ ವಿಜೃಂಭಣೆಗೆ ಇಲ್ಲ ಕೊನೆ
ಯಾರೆಲ್ಲ ಇದಕ್ಕೆ ಹೊಣೆ

ಕೆಜೆಪಿ - ಬಿಜೆಪಿ

ಪ್ರತಿ ಪತ್ರಿಕೆಯಲ್ಲಿ ಯಡ್ಯೂರಪ್ಪ
ಹೇಳಿಕೆ ನೀಡಿ ಮಾಡುತ್ತಿದ್ದಾರೆ ರಂಪ
ಆಗಲೇ ಮುಳುಗುವ ಹಡಗಾಗಿದೆ ಕೆಜೆಪಿ
ಬಲೆ ಬೀಸಿದೆ ಮೋದಿ ಹೆಸರಲ್ಲಿ ಬಿಜೆಪಿ

ಜೋರು

ಕಾಲೇಜಿಗೆ ಹೋಗುವ ಹುಡುಗಿ
ಬಲು ಜೋರು
ಅನಿಸಿದರೆ ಕ್ಲಾಸು ಬೋರು
ಹೋಗಲು ಇದೆ ಪಿವಿಆರು

ನನ್ನೊಡತಿ

ನೀನು ಬಳಿ ಬಂದು
ಪ್ರೀತಿಯಲಿ ಮಿಂದು
ಬಾಳನು ಸಾಗಿಸುವಾಸೆ ನನಗೀಗ
ಬಾ ನನ್ನೊಡತಿ ನೀ ಬೇಗ

ಅಕ್ಕರೆಯ ನೋಟದಲಿ
ಬೆಚ್ಚನೆಯ ಅಪ್ಪುಗೆಯಲಿ
ಚುಂಬಿಸುವಾಸೆ ನನಗೀಗ
ಬಾ ನನ್ನೊಡತಿ ನೀ ಬೇಗ

ಎದೆಯಲ್ಲಡಗಿರುವ ಪ್ರೀತಿ
ನಿನ್ನ ಕಂಡಾಗ ಉಂಟಾಗುವ ರೀತಿ
ನೀ ದೂರ ಹೋಗುವ ಭೀತಿ ನನಗೀಗ
ಬಾ ನನ್ನೊಡತಿ ನೀ ಬೇಗ

ಬಾಳೆಂಬ ಬಂಧನ
ನಮ್ಮ ಈ ಸ್ಪಂದನ
ಹೀಗೆ ಮುಂದೆ ಸಾಗಿಸುವಾಸೆ ನನಗೀಗ
ಬಾ ನನ್ನೊಡತಿ ನೀ ಬೇಗ

ಘೋಷಣೆ

ಹೊಸ ಸರ್ಕಾರ ಬಂದಾಗ
ಜನಪ್ರಿಯ ಘೋಷಣೆ
ಮೂಲ ಸೌಕರ್ಯಕ್ಕೆ ಆದ್ಯತೆ
ಸ್ವಾತಂತ್ರ್ಯ ಬಂದು ೬೫ ವರ್ಷವಾದರೂ
ಆ ಘೋಷಣೆ ಅಂಗೇ ಐತೆ

ಶಿಲಾನ್ಯಾಸ

ಬಲು ವಿಚಿತ್ರ ನಮ್ಮ ವಿಕಾಸ
ಕೇಳಲನಿಸುವುದು ಆಭಾಸ
ಒಮ್ಮೆ ಮಾಡಿ ಶಿಲಾನ್ಯಾಸ
ಪಡೆಯುವರು ಆ ಕೆಲಸದಿಂದ ಸನ್ಯಾಸ

ಭೇಟಿ

ಅವರು ಮಾಡಿದ್ದರು
ಸಂತ್ರಸ್ತರ ಭೇಟಿ
ಅಲ್ಲಿ ಪುನಃ ಹಳೇ ಧಾಟಿ
ಕೈಗೊಳ್ಳುವೆವು ಸೂಕ್ತ ಕ್ರಮ
ಸಂತ್ರಸ್ತರ ಆಸೆಗೆ
"ಗೋವಿಂದಾಯ ನಮಃ"

ಪೇಶನ್ಸು - ಪೇಶಂಟು

ಕೆಲಸದಲ್ಲಿ
ಇರಬೇಕು
ಪೇಶನ್ಸು
ಇಲ್ಲದಿದ್ದರೆ
ಆಗುವೆವು
ಪೇಶಂಟು

ಸರ್ಕಾರಿ ಯೋಜನೆ

ಅಂದು
ಕೂಲಿಗಾಗಿ ಕಾಳು
ಆಯ್ತು ಕಳ್ಳರ ಪಾಲು
ಇಂದು
ಪಡೆಯಲು ನರೇಗಾ ವೇಜು
ಕೇಳುತ್ತಾರೆ ಪರ್ಸಂಟೇಜು

ವ್ಹಿಸ್ಕಿ - ಗುಟ್ಕಾ - ಮಟ್ಕಾ

ವ್ಹಿಸ್ಕಿ
ತುಂಬಾ ರಿಸ್ಕಿ
ಗುಟ್ಕಾ
ಲೈಫು ಗೊಟ್ಕಾ
ಮಟ್ಕಾ
ಲೈಫು ಮಟಾಶ್

ಏಕೆ?

ಕಂಡು ಕಾಣದ ಹಾಗೆ
ಕುವರಿ
ಕಣ್ ತಿರುಗಿಸಿ ಹೋದಳು
ಹಾಯ್..... ಎನ್ನಬೇಕು ಎನ್ನುವಷ್ಟರಲ್ಲಿ
ಬೈಕ್ ನ್ನು ಹತ್ತಿ
ಓರೆಗಣ್ಣಿನಿಂದ ನೋಡಿದಳು
೫ ವರ್ಷ ಗೆಳೆಯನಾಗಿದ್ದ ನಾನು
ಆ ಸಮಯದಲ್ಲಿ ಅಪರಿಚಿತನಾಗಿದ್ದೆ
ಕೊನೆಗೂ ಸಿಕ್ಕಿಲ್ಲ ಉತ್ತರ
ಗೆಳತಿ ಹಾಗೆ ಮಾಡಿದ್ದು ಏಕೆ?

ಕಾರಣ

ಅಂದು ಮೆಚ್ಚಿ
ಮುಚ್ಚುಮರೆಯಿಲ್ಲದೆ ನನ್ನೊಡನೆ
ಅಲೆದಾಡಿದ ನೀನು
ಇಂದೇಕೆ ಮುಚ್ಚಿಕೊಳ್ಳುವೆ
ಮುಖವನ್ನು
ಅದಕೆ ಕಾರಣ
ನನ್ನ ಮೇಲಿನ ಮುನಿಸೇ
ಅಥವಾ ಬದಲಾದ ನಿನ್ನ ಮನಸೇ?

ಕಥೆ-ವ್ಯಥೆ


ತೆಲುಗು ಸಿನಿಮಾ ರಿಲೀಸಿಗೆ
ಬಾಲ್ಕನಿ ಟಿಕೇಟಿಗೆ ಐನೂರು
ಗಾಂಧಿ ಕ್ಲಾಸಿಗೆ ಮುನ್ನೂರು
ಕನ್ನಡ ಸಿನಿಮಾ ಬಂದಾಗ
ಟಾಕೀಜಿನಲ್ಲಿ ಇರುವ ಜನ ಮೂ....ರು

ಬ್ರಹ್ಮಾಂಡ


ಮಾಡಿ ಹದಿನೆಂಟು ಅಡಿ ಎತ್ತರದ ಆಂಜನೇಯನಿಗೆ ಅಭಿಷೇಕ
ಊರಿನಲ್ಲಿ ಅಂತಹ ಮೂರ್ತಿ ಇರುವುದು ಏಕ
ಇದರಿಂದ ಅಲ್ಲಿ ಭಕ್ತರ ಸಾಲು
ಇರಬಹುದು ಎಲ್ಲರಿಗೂ "ಸಮಪಾಲು"

ಆಸೆ-ನಿರಾಸೆ

ಪ್ರೀತಿಸುವವಳು ಸಿಕ್ಕಾಗ ನೆಲ ಕಾಣಲಿಲ್ಲ
ಅದೇ ಪ್ರೀತಿ ಕೈಕೊಟ್ಟಾಗ ನೆಲೆ ಕಾಣಲಿಲ್ಲ
ಇದ್ದದ್ದು ಬಹಳ ಆಸೆ
ಉಳಿದಿದ್ದು ಕೇವಲ ನಿರಾಸೆ

ಮತದಾರ

ಚುನಾವಣೆಯ ಸಮಯದಲ್ಲಿ
ಮಾಡುವರು ಮತದಾರರ ಪಾದ ಪೂಜೆ
ನಂತರ ಪ್ರತಿದಿನ ಏರಿಸುವವರು (ನರ)ಬಲಿ

ಕಾಮತ್-ಖಾ-ಮತ್

ಚೆನ್ನಾಗಿದ್ದರೆ
ಕಾಮತ್
ಇರದಿದ್ದರೆ
ಖಾ-ಮತ್

ಅಂದ

ಅವಳ ಅಂದಕೆ
ಮಾರಿಹೋದ
ನಂತರ ಅವಳಿಗಾಗಿ
ಎಲ್ಲವನ್ನೂ ಮಾರಿಹೋದ

ಎಮ್ಮೆಲ್ಲೇ

ಎಮ್ಮೆಲ್ಲೇ
ಕೆಲಸ ಮಾಡದೇ ಆಗಿದ್ದಾನೆ
ಎಮ್ಮೆ ಲೇ

ಸಂಸದ

ನಿದ್ದೆ ಮಾಡುತಿರುವನು ಸದಾ
ಚುನಾವಣೆ ಬಂತೆಂದರೆ
ವೋಟಿಗಾಗಿ ಬಂದು
ತಟ್ಟುವನು ಜನರ ಮನೆಯ ಕದ

ಅಂದು-ಇಂದು

ಅಂದು ಶಾಲೆಯಲ್ಲಿ
ಇತ್ತು ಶಿಕ್ಷಣ
ಇಂದು ಬೆಳಿಗ್ಗೆ ಹಾಲಿನ ಲೋಟ
ಮಧ್ಯಾಹ್ನ ಬಿಸಿಯೂಟ
ಸೈಕಲ್ಲಿನಲ್ಲಿ ಓಡಾಟ
ಆದರೂ ನಿಂತಿಲ್ಲ
ಖಾಸಗಿ ಶಾಲೆಗಳತ್ತ ಓಟ

ಬಾಪು

ಬಾಪು
ಎಲ್ಲರ ಮಾತುಗಳಲ್ಲಿದೆ ನಿನ್ನ ಆಶಯಗಳ ಛಾಪು
ಹೊಡೆಯುವರು ಜನರದಕೆ ಕ್ಲ್ಯಾಪು
ಆದರೆ ಕಾರ್ಯಗತಗೊಳಿಸುವಲ್ಲಿ ಇದೆ ಗ್ಯಾಪು
ಅದಕೆ ಎಲ್ಲ ಯೋಜನೆಗಳು ಆಗುತಿವೆ ಫ್ಲಾಫು

ಬಾಪು
ನಿನ್ನ ಕನಸು ರಾಮರಾಜ್ಯ
ಇಲ್ಲಿ ತುಂಬಿದೆ ವ್ಯಾಜ್ಯ
ಖಾಲಿಯಾಗದು ಬ್ರಷ್ಟಾಚಾರದ ತ್ಯಾಜ್ಯ
ಮುಂದೆ ಆಗದಿರಲಿ ರಾವಣನ ಸಾಮ್ರಾಜ್ಯ

ಬಾಪು
ನಿನ್ನ ಕನಸು ಸುಂದರ
ಭಾರತಾಂಬೆಯ ಪುಣ್ಯ ಮಂದಿರ
ತೊಲಗಲಿ ಎಲ್ಲ ಹಂದರ
ಬಾಳಲಿರಲಿ ನಗುವ ಚಂದಿರ

ಹೆಗ್ಗಳಿಕೆ

ದಿನಕ್ಕೊಂದು
ರಾಜಕೀಯ ಹೇಳಿಕೆ
ಅದಕ್ಕೆ
ಕೆಲವರಿಂದ ಹೊಗಳಿಕೆ
ಮತ್ತೆ ತೆಗಳಿಕೆ
ಆದರೂ ಮಾಧ್ಯಮಗಳಲ್ಲಿ ಬಂದಾಗ
ಮನದಲ್ಲೇ ಅಂದುಕೊಳ್ಳಬಹುದು
ಇದೇ ನನ್ನ ಹೆಗ್ಗಳಿಕೆ

ಥಳಕು ಬಳಕು

ಅವಳ ನಡಿಗೆ
ಥಳಕು ಬಳಕು
ಕಣ್ಣಲ್ಲಿ ಇದೆ ಹೊಳಪು
ಉಟ್ಟ ಸೀರೆ ಬಿಳುಪು
(ಇದನ್ನು ಇನ್ನು ದುರಂತ ಮುಕ್ತಾಯಕ್ಕೆ ಒಯ್ಯಬೇಕೆಂದಿದ್ದರೆ)
.
.
.
.
.
.
ಕೈಯಲ್ಲಿದೆ ಪಾಪು

ಕಾಮನಬಿಲ್ಲು

ಅವಳು ಮಳೆ ಬಿಲ್ಲು
ಬಳಿ ಬರದೇ ಅನಿಸುತಿದೆ
ಬರಿ ಕಾಮನಬಿಲ್ಲು

ಮುತ್ತು

ಅವಳು ಬಳಿ ಬಂದಾಗ
ಸುಗಂಧದ ಸುವಾಸನೆ ಘಮ್ಮೆಂದಿತ್ತು
ಕೊಟ್ಟಾಗ ಮುತ್ತು
ಏರಿತ್ತು ಮತ್ತು
ಅನಿಸಿತ್ತು ಗಮ್ಮತ್ತು
(ಇದನ್ನು ಇನ್ನು ದುರಂತ ಮುಕ್ತಾಯಕ್ಕೆ ಒಯ್ಯಬೇಕೆಂದಿದ್ದರೆ)
.
.
.
.
.
.
 
ಎದುರು ಬರುತ್ತಿತ್ತು ಎತ್ತು
ಬಂದಿತ್ತು ಕುತ್ತು
ಇಳಿದಿತ್ತು ತಾಕತ್ತು

Tuesday, September 17, 2013

ನೇತಾರ

ಉತ್ತರ ಹಾರಿಕೆ
ಕಳಕಳಿ ತೋರಿಕೆ
ಪ್ರತಿದಿನ ಹೊಸ ಹೇಳಿಕೆ
ಆದರೂ
ಓಟಿಗಾಗಿ ಕೋರಿಕೆ

ವ್ಯತ್ಯಾಸ

ನನಗೆ ಅವಳಿಗೆ
ತುಂಬಾ ವ್ಯತ್ಯಾಸ
ನಾನು ತ್ರಿಜ್ಯವಾದರೆ
ಅವಳು ವ್ಯಾಸ

ನನ್ನವಳು

ಕತ್ತಲೆಯ
ಕನಸಲ್ಲಿ
ಕಣ್ಣೆದುರಿಗೆ
ಕಾಣಿಸಿ
ಕಣ್ ತೆರೆಯುವಷ್ಟರಲ್ಲಿ
ಮಾಯವಾದಳು
ಅವಳು
ನನ್ನವಳು

ವ್ಯತ್ಯಾಸ


ಸರ್ಕಾರಿ ನೌಕರಿ
ಆರಾಮ್
ಖಾಸಗಿಯವರು
ಹೇಳುವರು
ಹೇ!!!!!! ರಾಮ್

ಅಳು

ಅವಳು
ಸಿಗಳು
ಎಂದು
ತಿಳಿದಾಗ
ಬಂದಿತ್ತು
ನನಗೆ
ಅಳು

ಕಳವಳ-ಕವಳ

ಆತನ ಆರೋಗ್ಯದ ಬಗ್ಗೆ
ಕಳವಳ
ಆದರೂ ಆತ ತಿನ್ನುತ್ತಿದ್ದ
ಕವಳ

ನಮ್ಮ ಜನಾ-ನಮ್ಮ ದೇಶ

ಉಗ್ರ ಹೋರಾಟ
ಕಲ್ಲು ತೂರಾಟ
ಹೆಚ್ಚಾದರೆ ಕಾಟ
ತಿನ್ನುವರು
ಪೋಲೀಸರ ಲಾಠಿ ಏಟ

ಮುಂಗಾರು

ರಾಜ್ಯದಲ್ಲಿ
ಮುಂಗಾರು
ಜೋರಾಗಿ
ಜನರಾದರು
ಕಂಗಾಲು

ಸಾರಿ-ನಾರಿ

ಉಟ್ಟರೆ ಸಾರಿ
ಭಾರತೀಯ ನಾರಿ
ಇಲ್ಲದಿದ್ದರೆ
ಅನಿಸಿಕೊಳ್ಳುವಳು
ಹೆಮ್ಮಾರಿ

ಕಸಿವಿಸಿ

ನೆಟ್ಟ
ಸಸಿ
ಕಾಣದಾಗ
ಆಯಿತು
ಕಸಿವಿಸಿ

Monday, September 16, 2013

ಯೋಚನೆ


ರಸ್ತೆಯಲಿ ಅಕ್ರಮ ಮರಳು ಲಾರಿ
ಹಿಡಿಯುವವರು ಹಲವು ಬಾರಿ
ಹಿಡಿಯದಿದ್ದಾಗ ತಿಳಿಯಬೇಕು
ಕೊಟ್ಟಿರುವವರು ಮಾಮೂಲಿ ಭಾರಿ

ಸಕ್ಕರೆ-ಕೊಕ್ಕರೆ


ಅವಳು ಸಿಕ್ಕರೆ
ಬಾಳು ಸಕ್ಕರೆ
ಸಿಗದಿದ್ದರೆ
ನೀರಿನಲ್ಲಿ
ಸಿಗದ
ಮೀನು
ಹುಡುಕುವ
ಕೊಕ್ಕರೆ

ಶ್ರೀ-ಶಾಂತ


ತನ್ನ ಸಾಮರ್ಥ್ಯದಿಂದ ಆಗಿದ್ದ
ಎಲ್ಲರ ಅಯಸ್ಕಾಂತ
ಸ್ಪಾಟ್ ಫಿಕ್ಸಿಂಗ್ ನಿಂದ ಆದ
ಶ್ರೀ ಶಾಂ............................ತ

ಫೆಸ್ ಬುಕ್-ಪಾಸ್ ಬುಕ್


ನಾನು ಅವಳು ಸೇರಲು ಕಾರಣ
ಫೇಸ್ ಬುಕ್
ಬೇರೆಯಾಗಲು
ಅವಳಪ್ಪ ನೋಡಿದ್ದ ನನ್ನ ಪಾಸ್ ಬುಕ್

ಪ್ರೇಮಕವಿ


ಅವಳಿಗಾಗಿ ಆದ ಪ್ರೇಮಕವಿ
ಅವಳು ಸಿಗದಿದ್ದಾಗ ತೊಟ್ಟ ಕಾವಿ

ಅಡುಗೆ-ಉಡುಗೆ


ಹೆಂಡತಿ-ಹೇಗಿದೆ ಈ ನನ್ನ ಉಡುಗೆ
ತಿಂದ ಹಾಗಿದೆ ನೀ ಮಾಡಿದ ಅಡಿಗೆ

ತಪ್ಪು

ಅಂದು ಬಂಗಾರಪ್ಪ
ಇಂದು ಯಡ್ಯೂರಪ್ಪ
ಹೊಸ ಪಕ್ಷ ಕಟ್ಟಿ ಮಾಡಿದರು ತಪ್ಪಾ

ಅತ್ತೆ-ಕತ್ತೆ

ಚೆನ್ನಾಗಿದ್ದರೆ ಅತ್ತೆ
ಇಲ್ಲದಿದ್ದರೆ ಸೊಸೆಯ ಪಾಲಿಗೆ ಆಗುವಳು
.
.
.
.
.
ಕತ್ತೆ

ಫ್ಯೂಚರು

ಸರಿಯಿದ್ದರೆ ಟೀಚರು
ಮಕ್ಕಳಿಗೆ ಒಳ್ಳೆ ಫ್ಯೂಚರು
ಸರಿಯಿರದಿದ್ದರೆ ಲೆಕ್ಚರು
ಮಕ್ಕಳ ಲೈಫಾಗುವುದ ಟ್ರ್ಯಾಜೆಡಿ ಪಿಚ್ಚರು

ಕ್ಷಿಪಣಿ ಪ್ರಯೋಗ

ಯಶಸ್ವಿ ಕ್ಷಿಪಣಿ ಉಡಾವಣೆ
ಸೇನೆಗೆ ಹೊಸ ಅಸ್ತ್ರದ ಜಮಾವಣೆ
ಪಾಕ್-ಚೀನಾಕ್ಕೆ ಎಚ್ಚರಿಕೆಯ ಸೂಚನೆ
ಬಿಡಬಹುದವರು ಅತಿಕ್ರಮಣದ ಯೋಚನೆ

ಕವನ ಸಂಕಲನ

ಅವನು ಬರೆದಿದ್ದು ಕವನ ಸಂಕಲನ
ಅದಕಾಗಿ ಮಾಡಿದ ಕೂಡಿಟ್ಟ ಮೊತ್ತದ ವ್ಯವಕಲನ
ಆಗಬಹುದೆಂದು ಅದು ಗುಣಾಕಾರದ ಮೊತ್ತ
ಆದರೆ ಉಳಿದಿದ್ದು ಭಾಗಾಕಾರದ ಅಲ್ಪಶೇಷ

ನೆನಪಿನಂಗಳದಿಂದ

ನಾನು ಸೆಕಂಡ್ ಪಿಯುಸಿಯಲ್ಲಿರುವಾಗ, ವರ್ಷದ ಕೊನೆಯಲ್ಲಿ ಎಲ್ಲರೂ ಅಟೋಗ್ರಾಫ್ ತೆಗದುಕೊಳ್ತಾ ಇದ್ರು. ನಮ್ಮ ಕ್ಲಾಸಿನಲ್ಲಿ ಇರೋ ಮೇಘನಾ ಅನ್ನೋ ಹುಡುಗಿ ಕೂಡ ನನಗೆ ಅಟೋಗ್ರಾಫ್ ಬರೆಯಲಿಕ್ಕೆ ಕೊಟ್ಳು. ಅವಳು ಎರಡು ವರ್ಷದಲ್ಲಿ ಕ್ಲಾಸಿನಲ್ಲಿ ಮಾತಾಡಿದನ್ನೇ ನಾನು ನೋಡಿರಲಿಲ್ಲ.... ಅಷ್ಟು ಸೈಲೆಂಟ್. ಅದನ್ನಾ ನೆನೆಸಿಕೊಂಡು ಅವಳ ಕೊಟ್ಟ ಬುಕ್ ನಲ್ಲಿ ನಾನು ಈ ಸಾಲುಗಳನ್ನು ಬರೆದೆ

ಏನಮ್ಮಾ ಮೇಘನಾ
ನೀನೇನು ಮೌನದ ಗಣಿನಾ
ಒಂದ ಸಲಾನೂ ಕೇಳಿಲ್ಲ ಕ್ಲಾಸಿನಲ್ಲಿ ನಿನ್ನ ಧ್ವನಿಯನ್ನಾ
ಈಗ ನಿನ್ನ ಬಗ್ಗೆ ಹೇಗೆ ಬರೆಯಲಿ ನಾ.....????

ಪ್ರೀತಿ ಮಾಡಿದವರ "ಫಲ"


ಕರ್ಮಣ್ಯೇ ವಾಧಿಕಾ"ರಸ್ತೇ" "ಮಾ""ಫಲೇ"ಶು"ಕದಾ""ಚನ:"
ಅಮ್ಮಣ್ಣಿ "ರಸ್ತೆ"ಗೆ ಬಾ
ನಿಮ್ಮ"ಮ್ಮಾ" ಮನೆಯಲ್ಲಿದ್ದಾರೆ
ಇದ್ದೇನೆ ನಿಮ್ಮನೆ ಹಿಂದಿನ "ಕದ""ದಾಚೆ" ನಾ

Sunday, September 15, 2013

ನಯ ವಂಚನೆ

ಘಟನೆ ಬಳಿಕೆ
ಸ್ಥಳದ ಪರಿಶೀಲನೆ
ಅಲ್ಲಿ ಪರಿಹಾರದ ಆಶ್ವಾಸನೆ
ನಂತರ ದೀರ್ಘ ಸಮಾಲೋಚನೆ
ಕೊನೆಗೆ ಮರೆತು
ಮಾಡಬೇಡಿ ಅದರ ಬಗ್ಗೆ
............ಯೋಚನೆ

ಕಾರಣ

ಸಚಿವ ಸ್ಥಾನ ಸಿಗದಿರಲು
ಕಾರಣ ಕಳಂಕಿತ
ಆದರೆ
ಚುನಾವಣೆ ನಿಲ್ಲಲು
ಹೈಕಮಾಂಡ್ ಅಂಕಿತ

ಯಾಕೋ

ಪೆಟ್ರೋಲ್ ಬೆಲೆ ಹೆಚ್ಚಾದಾಗೆಲ್ಲ
ಮಾಡುವರು ಸ್ರೈಕು
ಹಲವೆಡೆ ರಾಸ್ತಾ ರೋಕೋ
ಇದರ ಪರಿಣಾಮ ನೋಡಿದಾಗ
ಅನಿಸುವುದು ಇವೆಲ್ಲಾ ಯಾಕೋ

ಕಳಕಳಿ - ಕಳ್ಳ ಕಳ್ಳಿ

ಮಾತಿನಲ್ಲೇ
ಅವರದ್ದು
ಕಳಕಳಿ
ಕೃತಿಯಲ್ಲಿ
ಇಬ್ಬರೂ
ಕಳ್ಳ ಕಳ್ಳಿ

ನೀರುಳಿಸಿ

ನೀರುಳಿಸಿ
ನೀರುಳಿಸಿ
ಎಂದು ಸಾರಿ ಸಾರಿ ಹೇಳಿದರೂ
ಹಲವರು ಹೇಳುವರು
ಸಾರಿ
ನಮಗೆ ನೀರ್ ಪ್ರಾಬ್ಲಮ್ ಇಲ್ಲಾರಿ

ಕಾದಂಬರಿ

ಅವನ ಬಾಳಿನಲ್ಲಿ ಕವನವಾಗಿ ಬಂದ ಅವಳು
ಕಥೆಯಾಗಿ ಹೋದಳು
ಅವನೋ ಬಲು ಚತುರ
ಅದನ್ನೇ ಕಾದಂಬರಿಯಾಗಿಸಿದ

ವೇದನೆ

ಚುಚ್ಚಿ ಚುಚ್ಚಿ ಮಾತನಾಡಿ
ನಿತ್ಯ ಕೊಲ್ಲುವರು ನನ್ನ

ಗಂಡನ ಸಿಟ್ಟು
ಮಾವನ ತಾತ್ಸಾರ
ಅತ್ತೆಯ ಕಾಟ
ಸೇರುತ್ತಿಲ್ಲ ಊಟ

ಮಾತು ಮಾತಿಗೆ
ತವರು ಮನೆಗೆ ಬೈಗುಳ
ದಿನಬೆಳಗಾದರೆ ಮನೆಯಲ್ಲಿ ಜಗಳ

ಅಪ್ಪನ ಪ್ರೀತಿ
ಅಮ್ಮನ ಮಮತೆ
ಈಗ ಮುಗಿದು ಹೋದ ಕಥೆ

ಎಲ್ಲರ ಮುಂದೆ ಹೇಳಿಕೊಂಡೆ
ಅವರ ಬಾಯಲ್ಲಿ ಬರಿ ವೇದಾಂತ
ಅದೇ..................
ಕೊಟ್ಟ ಹೆಣ್ಣು ಕುಲಕ್ಕೆ ಹೊರೆ
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ

ಕೇಳಲು ಸುಲಭ
ಸಹಿಸಲು ...........................

ಆದರೂ ನುಂಗಲಾಗದೊಂದು ಮಾತು
"ಹೆಣ್ಣು ಸಂಸಾರದ ಕಣ್ಣು"

ದಿನದ ಹೈಲೈಟ್ಸ್


ಅತ್ಯಾಚಾರಿಗಳು ಗಲ್ಲಿಗೆ
ಮೋದಿ ದಿಲ್ಲಿಗೆ
ಪರಿಣಾಮ
ಎಲ್ಲರ ಮುಖದಲ್ಲಿ ನಗೆ

Monday, September 9, 2013

ಕೈ

ಕೊಡು ಕೊಡು
ಎಂದು ಕಾಡಿ ಬೇಡಿದಾಗ
ಕೊಡಲಿಲ್ಲ
ಕಾದು ಕಾದು ಕಾದು
ಕೊನೆಗೆ ಕಾಣದಂತೆ
ಮಾಯವಾದ ಅವಳು
ಕೊಟ್ಟೇಬಿಟ್ಟಳು
.
.
.
.
.
.
.
ಕೈ

ಚಕ್ಕುಲಿ-ಚಿಕ್ಕಿಲಿ

ಗಣೇಶ ಹಬ್ಬಕ್ಕೆ ಮಾಡಿದ್ದರು
ಚಕ್ಕುಲಿ
ಅದನ್ನು ತಿಂದು ಹಾಕಿತು
ಚಿಕ್ಕಿಲಿ

ಅರ್ಧಾಂಗಿ


ನನ್ನ ಬಾಳಿನ
ನಂದಾದೀಪ ನೀನು
ಏಕೆ ನೊಂದುಕೊಂಡೆ
ಅರಿಯದೆ ಮಾಡಿದ ತಪ್ಪಿಗೆ
ನೀನಿಡಿದೆ ಅಗಲುವಿಕೆಯ ಶಿಕ್ಷೆ
ಬದಲಾಗಿದೆ ನನ್ನ ಜೀವನದ ನಕ್ಷೆ
ಏಕಾಂಗಿಯಾಗಿ ನಿನ್ನ ನೆನೆಯುತಿರುವೆ
ಓ ಅರ್ಧಾಂಗಿ
ತಿರುಗಿ ಬಾ ಆ ತಪ್ಪನ್ನು ನುಂಗಿ
ನಗಲು ಇವೆ ಹಲವು ಕಾರಣ
ವಿರಹ ವೇದನೆಯಲಿ
ವಿಲವಿಲ ಒದ್ದಾಡುತಿರುವೆ
ಮನ್ನಿಸು ಮನದೆನ್ನೆ
ಕೊಡುವೆ ನನ್ನ ಕೆನ್ನೆ
ಮುದ್ದೋ ಗುದ್ದೋ
ನೀ ನಿರ್ಧರಿಸು