Followers

About Me/ನನ್ನ ಬಗ್ಗೆ

Saturday, March 8, 2014

ಇನಿಯನ ನೆನಪು

ಇಬ್ಬನಿಯ
ಹನಿಯಲ್ಲಿ
ಇನಿಯನ
ನೆನಪು
ಕಬ್ಬಿನ
ಸಿಹಿಯಲ್ಲಿ
ಕಾಡುವ
ನೆನಪು
ಮಲ್ಲಿಗೆಯ
ಕಂಪಲ್ಲಿ
ಸುವಾಸನೆಯ
ನೆನಪು
ನೀ ಹೋದ
ದಾರಿಯಲ್ಲಿ
ಕಾಲ್ಗೆಜ್ಜೆ

ನೆನಪು

ಇಬ್ಬಗೆಯ ಪ್ರೀತಿ

ಇನಿಯನ
ಇಬ್ಬಗೆಯ ಪ್ರೀತಿ
ಪ್ರಿಯತಮೆಗೆ
ಚಿಂತೆಗೀಡು ಮಾಡಿದೆ
ಮಾಡಿದ ಅಡುಗೆ
ತಿನ್ನುವ ಮೊದಲೇ
ಇನಿಯ

ಮಲಗಾಗಿದೆ

ದುಂಬಿ - ದೊಂಬಿ

ನನ್ನ ಹೃದಯದ
ಕಡಲಲ್ಲಿ
ಹಾರಾಡೋ
ದುಂಬಿ
ಏಕೆ ಹಚ್ಚಿದೆ
ನನ್ನ ಎದೆಯೊಳಗೆ
ಪ್ರೀತಿಯ

ದೊಂಬಿ

ಯತ್ನ

ಮರಳಿ ಯತ್ನವ
ಮಾಡೆಂದ
ಮಾತು
ಮನದಲ್ಲಿ
ಮೂಡಿ
ಬರೆಯುತಿರುವೆ
ಪ್ರೇಮಪತ್ರವ
ಮತ್ತೊಮ್ಮೆ

ಮಗುದೊಮ್ಮೆ

ವಿಧಿಬರಹ

ಮುದಿ
ಹರಿಣವ
ನೋಡಿ
ಖುಷಿಪಡುತ್ತಿದೆ
ಹುಲಿ!
ಭೂರಿ
ಭೋಜನವೆಂದು!
ಪಾಪ
ತಿಳಿಯದದಕೆ
ಬೇಟೆಗಾರನ
ಗುಂಡು
ಎದೆಯನು
ಸೀಳಿ
ಆಕ್ರಂದನವ

ಕೇಳಿಸಿತು!

ಕಾಲ್ಗುಣ!!!!!!!!

ಕಾಲ್ಗುಣ
ಸರಿಯಿಲ್ಲವೆಂದು
ಹಂಗಿಸಿ
ಅವಳ
ನಿಂದಿಸಿದರು!
ಜನ
ಅಂತರಾಳದ
ಮನವನು
ಅರಿಯದೇ!
ಹೆಣ್ಣಿನ
ಕಣ್ಣೀರು!
ಮಣ್ಣಿನಲಿ
ಸೇರಿ
ಭೂಮಾತೆ
ಆಗಿರುವಳು
ಹಸಿ!
ಹಸಿದ
ಹೊಟ್ಟೆಯಲಿ
ಕುಸಿದು
ಕುಳಿತಿಹಳು!
ತಾಗುತಿದೆ
ಕೈಮೈಗೆ
ಬಿಸಿ!
ಮನದಲಿ

ಕಸಿವಿಸಿ!

ಬೀಗ

ಬಾಗಿಲ
ಹಿಂದಿನ
ಚಿಲಕ
ಭದ್ರವಾಗಿದೆ!
ಆದರೆ
ಮನಸಿಗಿರದ
ಬೀಗ
ಬರೀ
ಬೇಗುದಿಯನು

ತಂದಿದೆ!

ಪರಿಧಿ

ಕೆಲಸದ
ಒತ್ತಡದಲಿ
ಕನಸು
ಕಾಣಲು
ಹೆದರಿಕೆ!
ಕನಸು ಕನಸಾಗಿರುವುದೋ?
ನನಸಾಗುವುದೋ?
ಗೊಂದಲದ ಗೂಡಾಗಿದೆ ಮನಸು!
ಬೆಟ್ಟದಷ್ಟಿದೆ ಕನಸುಗಳ ರಾಶಿ

ಮುನ್ನುಗ್ಗುತ್ತಿದೆ ವಾಸ್ತವದ ಪರಿಧಿಯನು ದಾಟಿ!

ಅಕಾಲ..........

ನಿದಿರೆ ಬರದೆಂದು
ಮದಿರೆಯ ಪ್ರೀತಿಸಿದ
ಪ್ರಾಯದಲಿ ಮುಪ್ಪು
ದಿನಗಳಣೆಸುತ
ಕಳೆಯುತಿರುವ
ಬದುಕನ್ನು

ಜವರಾಯನ ಭಯದಲ್ಲಿ

ಚಂದ

ನಾರಿಗೆ ಸೀರೆ ಚಂದ
ಪುರುಷನಿಗೆ ಸೀರೆ ಉಟ್ಟ ನಾರಿ

ಜೊತೆಗಿದ್ದರೆ ಚಂದ

ಭೂಷಣ-ಭಾಷಣ

ಮಾನವನಿಗೆ ಮಾತೇ
ಭೂಷಣ
ಅದೇ ರಾಜಕಾರಿಣಿಗೆ

ಭಾಷಣ

ಪ್ರೇಮ ಸ್ಪರ್ಶ

ನೀನಿರದೇ
ಬಾಳಿಗಿಲ್ಲ ಅರ್ಥ
ಬಾಳೆನಿಸುವುದು ವ್ಯರ್ಥ
ನೀಡು ನೀ ಎನ್ನ ಬಾಳಿಗೆ
ಪ್ರೇಮ ಸ್ಪರ್ಶ
ಕಳೆದು ಬಿಡುವೆ ನಗುನಗುತ

ನೂರು ವರ್ಷ

ವಾಸ್ತವ

ಹಸಿವು ಸಂಕಟದಲಿ
ಮರುಗಿ ಮುದುಡಿ
ಕುಳಿತಿರುವ ಜನ!
ಜರಿಯುತಿರುವರು
ದೇವರನು ಅನುದಿನ!
೧ ರೂ ಅಕ್ಕಿ
ಕೊಟ್ಟವ ದೇವರಾದ
ದುಡಿಯಲು ಶಕ್ತಿ ಕೊಟ್ಟವ
ಬೇಡವಾದ
ಮತ್ತೆಮತ್ತೆ ಅದೇ ಕನಸು
ಇನ್ನು ಏನೋ ಕೊಡುವರೆಂದು

ತೋಳ್ಬಲದ ಶಕ್ತಿಯನು ಮರೆಯುತ!

ಪರಿಮಿತಿ

ಮಾನಿನಿಯ
ಕಣ್ಣಲ್ಲಿ
ಮೈದಳೆದ ಪ್ರೀತಿ!
ಮೋಹಿನಿಯು
ಕಣ್ಣಲ್ಲಿ
ಕುಕ್ಕುವ ರೀತಿ!
ಮೇನಕೆಯು
ಬಿಂಕವ
ತೋರುವ ರೀತಿ!
ಅಪ್ಸರೆಯ ನಡುವು
ಬಳಕುವ
ರೀತಿ!
ನಿನ್ನ ಬಗ್ಗೆ
ಹೇಳಲು
ಶಬ್ದಗಳಿಗಿಲ್ಲ ಮಿತಿ
ನಮ್ಮಿಬ್ಬರ ಪ್ರೀತಿಗೆ
ಹಾಕುವ ದಂಪತಿ

ಎಂಬ ಪರಿಮಿತಿ

ರುಚಿ

ಬೆಟ್ಟದ ಮೇಲಿನ
ನೆಲ್ಲಿಕಾಯಿ
ಸಿಹಿಯಾದರೇನು
ಹುಳಿಯಾದರೇನು
ಉಪ್ಪಿನಕಾಯಿ

ರುಚಿ ಬಲು ಚೆಂದ

ನಿಯಮ

ಜಗದ ನಿಯಮ
ಬದಲಾಗದು
ಏಕೆಂದರೆ
ಬದಲಾವಣೆ

ಜಗದ ನಿಯಮ

ತಾತಾ

ಗಾಂಧಿ ತಾತಾ
ನೀ ಹೋದ ಬಳಿಕ
ಎಲ್ಲರೂ ಅನ್ನುತ್ತಿದ್ದಾರೆ

ತಾ ತಾ ತಾ

ತಾಳಿ

ಹರೆಯದ ಪ್ರೀತಿ
ಮರೆಯುವ ಮೊದಲು
ಬಿದ್ದಿದೆ ಕತ್ತಿಗೆ ತಾಳಿ!
ಪ್ರೀತಿ ಯಾರದೋ
ತಾಳಿ ಯಾರದೋ?
ಯಾವ ದುಂಬಿಗೆ
ಯಾವ ಹೂವು!
ಒಳಗೆ ನೋವು
ಹೊರಗೆ ಕೃತಕ ನಗುವು
ಅತ್ತೆ, ಮಾವ, ಗಂಡ, ನಾದಿನಿ..........
ಎಲ್ಲರೂ ಇರುವರು ನಗುತ
ಹೊಸಮನೆಗೆ ಬಂದ ಸೊಸೆ
ಕುಳಿತಿರುವಳು ತನ್ನ

ಇನಿಯನ ನೆನೆಯುತ

ಹೂವು-ಹಾವು

ನನ್ನ ಬಾಳಿಗೆ
ಬಂದ ನೀ
ಮಲ್ಲಿಗೆ ಹೂವು
ಎಂದೂ ಆಗಬೇಡ
ನನ್ನ ಬಾಳಿಗೆ

ಹಾವು

ಭುವಿ-ಬಾನು

ನೀ ಭುವಿ
ನಾ ಬಾನು
ಇಬ್ಬರು ಸೇರಲು

ಬಾಳಲಿ ಜೇನು

ವರಹ-ವಿರಹ

ನೀನಿರಲು
ವರಹ
ಇರದಿರಲು

ಬರೀ ವಿರಹ

ಪ್ರೀತಿ-ಭೀತಿ

ಸ್ನೇಹದಲಿ
ಪ್ರೀತಿ
ಪ್ರೀತಿಯಲಿ

ಭೀತಿ

ಸಖಿ-ಸುಖಿ

ನೀನಾದರೆ ನನ್ನ
ಸಖಿ
ನಾನಾಗುವೆ

ಸುಖಿ

ನೀ-ಸ್ವಾರ್ಥ

ಮಾಡಬೇಕು ಸೇವೆ
ನಿಸ್ವಾರ್ಥ
ಅದಕೆ ಬಿಡಬೇಕು ಮನುಜ

ನೀ ಸ್ವಾರ್ಥ

ಜೀವನ ಬೃಂದಾವನ

ಬದುಕೆಂಬ ಮರದಲ್ಲಿ
ಜಗಳವೆಂಬುದು ಒಂದು ಹಣ್ಣು
ಅದಕ್ಕೆ ಕಾರಣವಾಗಬಹುದು ಗಂಡು/ಹೆಣ್ಣು
ಹೊಂದಿಕೊಂಡರೆ ಜೀವನ ಬೃಂದಾವನ

ಇಲ್ಲದಿದ್ದರೆ ಬರೀ ಸ್ಮಶಾನ

ಪ್ರೇಮದ ಬೀಜ

ನೀ ನನಗೆ ಬೇಕು
ಎಂದು ಪ್ರೇಮದ ಬೀಜ
ಬಿತ್ತಿದ
ಗೊತ್ತಿಲದೇ ಬದಲಾಗಿ

ಕಾಲ್ಕಿತ್ತಿದ

ವಿ-ಭಜನೆ

ಕೊನೆಗೂ ಆಯ್ತು ಆಂಧ್ರ
ವಿಭಜನೆ
ಈಗ ಲೋಕಸಭೆಗೆ
ಪಕ್ಷಗಳ ಹೊಂದಾಣಿಕೆ

ಭಜನೆ

ಭಾವನೆ

ಮನಸಿನ
ಹುಡುಗಿ
ಕನಸಲಿ
ಬಂದು
ಕಾಡುತಿರಲು
ಬಾಡುತಿರುವ
ಮುಖ

ಅರಳಿತು

ಅಣಕ

ಬಾವಿಯಲಿನ ನೀರು
ಆವಿಯಾಗಿ
ಖಾಲಿಯಾಗುತಿದೆ!
ಪಕ್ಕದ ಕೊಳವೆ ಬಾವಿ
ಈ ಬಾವಿಯ ನೀರನ್ನು
ಜರ್ರನೆ ಎಳೆಯುತಿದೆ!
ಕೊಳವೆ ಬಾವಿಯ ಸಾಲ
ಬೆಳೆದ ಬಡ್ಡಿಯ ಬಾಲ
ಕೃಷಿಕನ ಕೊಲ್ಲುತಿದೆ!
ಬರಿದಾದ ಬಾವಿ
ಬರಡಾದ ಭೂಮಿ

ಕೃಷಿಕನ ಅಣಕಿಸುತಿದೆ!

ನಮ್ಮ ಕಷ್ಟ

ಕುಂಟೆ ಕಾಲುವೆ
ಬರಿದು
ನೀರು ಅದರಲಿ ಬರದು!
ಕೆರೆಗೆ ಕೋಡಿಯಿಲ್ಲ
ಅದಕೆ ನೀರಿಲ್ಲ!
ಬಂದ ನೀರು
ನಿಲ್ಲದೇ ಹೋಗುತಿಹುದು
ಹರಿದು!
ಕಾಲುವೆಯಲಿ ಹೂಳು
ನೀರಿಲ್ಲದೇ ಗೋಳು!
ಕಾಡಿನಲ್ಲಿ
ಮರವಿಲ್ಲ
ಕುರಿ ಮೇಕೆಗೆ ಮೇವಿಲ್ಲ
ನಿತ್ಯವೂ ಅಲೆದಾಟ

ಎಲ್ಲ ವಿಧಿಯಾಟ

ಹಾಡು-ಪಾಡು

ಸರಿಯಿರದ
ಅವಳ ಹಾಡು
ಅವಳ ಪಡೆಯಲು
ನನ್ನ ಪಾಡು
ಎಂದೂ

ಮುಗಿಯದು

ಮಡಿಲು - ಒಡಲು - ಕಡಲು

ಅಮ್ಮನ ಮಡಿಲು
ಪ್ರೀತಿಯ ಒಡಲು

ಕರುಣೆಯ ಕಡಲು

ಕೇಜ್ರಿ - ಕ್ರೇಜಿ

ಕೇಜ್ರಿ
ಸರ್ಕಾರ
ಕ್ರೇಜಿಯಾಯ್ತು!
ಎಂಪಿ ಎಲೆಕ್ಷನ್ ಗೆ
ಬಿಜಿಯಾಯ್ತು!
ಅದನ್ನು
ನೋಡಿದವರಿಗೆ ಅನಿಸಿತು

ಯಾಕೋ ಇದು ಅತಿಯಾಯ್ತು!