ಜನವನರಿಯಲು
ತಿಳಿಯದಾದರೆ ಹೂಂ ಅನ್ನಬಹುದು
ಜಗವನರಿಯಲಾರದೆ?
ಸುಡು ಬಿಸಿಲು
ಭಯಂಕರ ಬರ
ಮುನಿಸಿರುವನು ಶಂಕರ!
ಉಕ್ಕಿ ಬಂದಿರುವ ಪ್ರವಾಹ
ಕೊಚ್ಚಿ ಹೋಗುತಿರುವ ಜನ
ಬೆಚ್ಚಿ ಬೀಳಿದರೆ
ಇಲ್ಲ ಪ್ರಯೋಜನ!
ಎಚ್ಚೆತ್ತು ಮಾಡು ನೀ ಕೆಲಸವ
ಬಿಟ್ಟು ಬಿಡು ಅತಿಯಾಸೆಯ
ಕಡಿದ ಕಾಡನು
ಹಿಡಿದು ಬೆಳೆಸಿ
ಹಚ್ಚ ಹಸಿರನು ಮತ್ತೆ ತಾ,
ಮೆಚ್ಚುವನು ಶಿವ
ಹುಚ್ಚು ಆಟವ ಬಿಟ್ಟುಬಿಡು
ಓ ಮನುಜ
ಅರಿತುಕೊ ಇದು ನಿಜ!!
No comments:
Post a Comment