ಬೆಚ್ಚಿ ಬೀಳಿಸುತಿರುವ ಸುದ್ದಿಗಳು
ದಟ್ಟವಾಗಿ ಇರುವಾಗ
ನಿದ್ದೆ ಬರದು ರಾತ್ರಿ!
ಕೊಚ್ಚಿ ಬಿಡುವರೋ ಇಲ್ಲ
ಚುಚ್ಚಿ ಬಿಡುವರೋ ಎಂಬ ಭಯ!
ದಿನ ಬೆಳಗಾದರೆ ಕೊಲೆ
ಅತ್ಯಾಚಾರ, ಅನಾಚಾರ, ಬ್ರಷ್ಟಾಚಾರ
ಸುದ್ದಿವಾಹಿನಿಗಳಲಿ!
ದೇವನಿರುವನೆಂಬ ನಂಬಿಕೆಯಲಿ
ಸಾಗುತಿರುವ ಪಯಣದಲಿ
ಹಲವು ಅಗ್ನಿ ಪರೀಕ್ಷೆ
ಆದರೂ ಕೊನೆಯಾಗುತ್ತಿಲ್ಲ ನಿರೀಕ್ಷೆ!
ಅದಕೆ ಪ್ರತಿದಿನ ಹೇಳುವೆ
ಗುರಿ ಮುಂದಿದೆ
ಸಾಧನೆಯೊಂದೇ ಸಮಾಧಾನ!
No comments:
Post a Comment