ತೋಡಲು ಬಾವಿ ನೀರು
ಬರದು
ಕಾರಣ ಜಮೀನುಗಳಲಿಲ್ಲ
ಬದು
ನೀರು ಕೆಳಗೆ
ಇಂಗದು
ಅದಕೆ ನೀರು
ಸಿಗದು
ಮಾಡಿ ಭೂತಾಯಿಯ ಒಡಲ
ಬರಿದು
ತೆಗೆದವು ಬೋರ್ ವೆಲ್ ನಿಂದ
ಇರಿದು
ಈಗಲಾದರೂ ಇದನು
ಅರಿತು
ಆಲೋಚಿಸು ನೀರಿನ ಸಂರಕ್ಷಣೆಯ
ಕುರಿತು
ಕೇಳು ಹಿರಿಯರ ನುಡಿ
ಅವರ ಆದರ್ಶದಲಿ ನಡಿ
No comments:
Post a Comment